May 17, 2025

Chitradurga hoysala

Kannada news portal

ಜಾತಿಗಳ ಎಲ್ಲೆ ಮೀರಿ ಸಂಭ್ರಮಿಸಿದ ಅಮ್ಮನ ರಥೋತ್ಸವ

1 min read

*ಸಂಭ್ರಮಕ್ಕೆ ಸಾಕ್ಷಿಯಾದ ಗೂಳಿಹಟ್ಟಿ ಗ್ರಾಮದ ಕರಿಯಮ್ಮ ದೇವಿ ರಥೋತ್ಸವ*

*ಎಂಟು ದಿನಗಳ ಸಂಭ್ರಮದ ಜಾತ್ರೆಗೆ ಹತ್ತಾರು ದೇವತೆಗಳ ಕಾರ್ಯ*

*ಜಾತಿಗಳ ಎಲ್ಲೆ ಮೀರಿ ಸಂಭ್ರಮಿಸಿದ ಅಮ್ಮನ ರಥೋತ್ಸವ*

CHITRADURGS HOYSALA NEWS/

ಹೊಸದುರ್ಗ :

ತಾಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿ ಏ.8 ರ ಮಂಗಳವಾರದಿಂದ ವಧುವಣಿಗೆ ಶಾಸ್ತ್ರ ಮೂಲಕ ಪ್ರಾರಂಭವಾಗಿದ್ದ ಜಾತ್ರೆ ಬುಧವಾರದಂದ್ದು ಧ್ವಜಾರೋಹಣ, ಹೊಳೆಪೂಜೆ, ದೊಡ್ಡಭಾನೋತ್ಸವ, ಬೇವಿನ ಸೀರೆ ಮತ್ತು ಶಾಸ್ತ್ರದಂಡ ನಡೆದವು, ಗುರುವಾರ ಶ್ರೀ ಉತ್ತಮ್ಮ ದೇವಸ್ಥಾನ ಮುಂಭಾಗ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ ಸಂಜೆ ಧೂಳು ಉತ್ಸವ, ಶುಕ್ರವಾರ ಗಜೋತ್ಸವ, ಭಂಡಾರದ ತಟ್ಟೆ ಎನ್.ಜಿ.ಹಳ್ಳಿ ಶ್ರೀ ಮುತ್ತಿನ ಮುಡಿಯಮ್ಮ ದೇವಿಯವರು ಗ್ರಾಮಕ್ಕೆ ಆಗಮನ ಮತ್ತು ಕೂಡು ಭೇಟಿ ಉತ್ಸವ ನಡೆದವು.

ಶನಿವಾರ ಗ್ರಾಮದ ಪ್ರಮುಖ ಬೀದಿಯಾದ ತೇರಿನ ಮನೆ ಹತ್ತಿರ ಹರಳೆಣ್ಣೆ ಹಚ್ಚಿ ಬೃಹತ್ ಗಾತ್ರದ ಹಗ್ಗವನ್ನು ರಥಕ್ಕೆ ಜೋಡಿಸಿದ ಬಳಿಕ ವಿವಿಧ ಬಾವುಟ ಮತ್ತು ಬಣ್ಣ ಬಣ್ಣದ ಬಟ್ಟೆಗಳಿಂದ
ಅಲಂಕಾರಗೊಳಿಸಲಾತು.
ಬೃಹತ್ ಹಾರಗಳಿಂದ ತೇರಿನ ಸೊಬಗನ್ನ ಮತ್ತಷ್ಟು ಹೆಚ್ಚಿಸಲಾಗಿತ್ತು. ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಮುತ್ತಿನ ಮುಡಿಯಮ್ಮ ದೇವಿ ಈ ಇಬ್ಬರು ಅಕ್ಕ-ತಂಗಿಯರನ್ನ ರಥದ ಮೇಲೆ ಪ್ರತಿಷ್ಠಾಪಿಸಿ ವಿವಿಧ ವಾದ್ಯಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತ್ತು.

ಬಂಗಾರದ ಒಡವೆಗಳಿಂದ ಅಲಂಕಾರಗೊಂಡು ಸುಗಂಧ ಹೂಗಳಿಂದ ಕಂಗೊಳಿಸುವ ಅಮ್ಮನವರ ವಿಗ್ರಹವನ್ನು ನೋಡಿದ ಭಕ್ತರು ತೆಂಗಿನ ಕಾಯಿ ಬಾಳೆಹಣ್ಣನ್ನು ಸಮರ್ಪಿಸಿ ನಾಣ್ಯ ಹಾಗೂ ಮಂಡಕ್ಕಿಯನ್ನು ತೇರಿಗೆ ಎಸೆದು ತಮ್ಮ ಇಷ್ಟಾರ್ಧಗಳನ್ನ ಬೇಡಿಕೊಂಡಿದ್ದಾರೆ.

ಗ್ರಾಮದಲ್ಲಿ ನಡೆದ ರಥೋತ್ಸವಕ್ಕೆ ಆಗಮಿಸಿದ ಭಕ್ತರು ರಥದ ಮುಂದೆ ಕುಣಿಯುವ ಸೋಮಣ್ಣ ಹೆಜ್ಜೆ ಕುಣಿತಕ್ಕಾಗಿ ಬಿರು ಬಿಸಿಲಿನಲ್ಲಿಯೂ ನಿಂತು ಸೋಜುಗಾದ ನೃತ್ಯ ನೋಡುವುದು ಜಾತ್ರೆಯ ವಿಶೇಷವಾಗಿತ್ತು.
ಈ ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗಾಗಿ ಪಾನಕ ಮತ್ತು ಪಲ್ಲಾರ ವಿತರಿಸಲಾಯಿತು.

ರಥೋತ್ಸವಕ್ಕಾಗಿ ಆಗಮಿಸಿದ ನೂರಾರು ಸಂಖ್ಯೆಯ ಭಕ್ತರಿಗಾಗಿ ಗ್ರಾಮಸ್ಥರು ಆಯೋಜಿಸಿದ್ದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ದಾಸೋಹದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು ವಿವಿಧ ಸಿಹಿ ಖಾಧ್ಯಗಳನ್ನ ಸ್ವೀಕರಿಸಿದ ಭಕ್ತರು ಸಂತೃಪ್ತರಾಗಿ ತಮ್ಮ ಊರಿನತ್ತ ಸಾಗಿದರು.

ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಗ್ರಾಮಕ್ಕೆ ಗ್ರಾಮವೇ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು, ಗ್ರಾಮದ ಪ್ರಮುಖ ದ್ವಾರಗಳಿಗೆ ಮಾವಿನ ಸೊಪ್ಪಿನ ತಳಿರು ತೋರಣಗಳನ್ನ ಕಟ್ಟಲಾಗಿತ್ತು. ದೇವಾಲಯಗಳೆಲ್ಲವೂ ಬಣ್ಣ ಸುಣ್ಣಗಳಿಂದ ರಂಗೇರಿದ್ದವು,ವಾದ್ಯಗಳ ಶಬ್ದಗಳು ಭಕ್ತಿಯ ಭಾವದಲ್ಲಿ ತೊಡಗುವಂತೆ ಮಾಡಿತು.

ಸಾಂಪ್ರದಾಯಿಕ ಆಚಾರ –

ವಿಚಾರಗಳು ನಮ್ಮಿಂದ ದೂರವಾಗುತ್ತಿರುವ ವಾತಾವರಣದಲ್ಲಿ ನಾವುಗಳಿದ್ದೇವೆ.ಆದರೆ ಈ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಗಳನ್ನ ನೋಡಿದಾಗ ಹೆಚ್ಚು ಸಂತೋಷವಾಯ್ತು ಜೊತೆಗೆ ಪ್ರತಿ ಆಚಾರ ವಿಚಾರಗಳಿಗೂ ಒಂದು ವೈಜ್ಞಾನಿಕ ಹಿನ್ನೆಲೆ ಇದೆ ಎನ್ನುವ ನಿಟ್ಟಿನಲ್ಲಿ ಗೂಳಿಹಟ್ಟಿ ಗ್ರಾಮ ಎಂಟು ದಿನಗಳ ಶ್ರೀ ಕರಿಯಮ್ಮನವರ ಜಾತ್ರೆಯನ್ನ ನಡೆಸುತ್ತಿದೆ ಈ ಜಾತ್ರೆಯಲ್ಲಿ ಭಾಗವಹಿಸಿದ್ದು ಖುಷಿ ತಂದಿದೆ.

*ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ:* ಬುರುಡೆಕಟ್ಟೆ ಆರ್ ರಾಜೇಶ್

About The Author

Leave a Reply

Your email address will not be published. Required fields are marked *