ನೀರು ನಿಲ್ಲದಂತೆ ನೋಡಿ ಕೊಳ್ಳೋಣ, ಮಲೇರಿಯಾ ಮುಕ್ತ ಮಾಡೋಣ:ನವೀನ್ ಕುಮಾರ್ ಸಿ.ಎನ್
1 min read
ನೀರು ನಿಲ್ಲದಂತೆ ನೋಡಿ ಕೊಳ್ಳೋಣ, ಮಲೇರಿಯಾ ಮುಕ್ತ ಮಾಡೋಣ:ನವೀನ್ ಕುಮಾರ್ ಸಿ.ಎನ್
ಚಿತ್ರದುರ್ಗ ಹೊಯ್ಸಳ ನ್ಯೂಸ್:
ಚಳ್ಳಕೆರೆ:
ತಾಲೂಕಿನ ಮೀರಸಾಬಿಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಆರೋಗ್ಯ ನಿರೀಕ್ಷಣಾಧಿಕಾರಿ ನವೀನ್ ಕುಮಾರ್ ಸಿ.ಎನ್ ಮಾತನಾಡಿ ದಿನ ನಿತ್ಯ ಜನ ಸಾಮಾನ್ಯರನ್ನು ಕಾಡುವ ಅನಾಫಿಲೀಸ್ ಸೊಳ್ಳೆಯಿಂದ ಹರಡುವ ಮಲೇರಿಯಾ ರೋಗವು ಮಾನವನ ಆರೋಗ್ಯವನ್ನು ಹದಗೆಡಿಸುತ್ತದೆ.
ಸ್ವಚ್ಚತೆ ಸುರಕ್ಷತೆಯ ಜೀವನಕ್ಕೆ ಪರಿಶುದ್ಧತೆಯು ಜನರ ಮೂಲ ಮಂತ್ರವಾಗಬೇಕು,ನಿತ್ಯ ನಿರಂತರವಾಗಿ ರೋಗಕಾರಕ ಬ್ಯಾಕ್ಟೀರಿಯಗಳ ಉಪಟಳದಿಂದ ಜಾಗರೂಕರಾಗಿರಬೇಕು,ಸುತ್ತ ಮುತ್ತಲ ಪರಿಸರ ಚೊಕ್ಕಟ ಮಾಡಿ ಶುಭ್ರ ವಾತಾವರಣ ಕಲ್ಪಿಸಿಕೊಂಡು ವಿವಿಧ ಮಾಲಿನ್ಯಗಳ ಕಲುಷಿತ ವಾತಾವರಣ ನಿಯಂತ್ರಣದಿಂದ ಫಲಪ್ರದವಾಗಬಹುದು.ವೈಜ್ಞಾನಿಕ ಪರಿಹಾರಗಳ ವಿಧಿ ವಿಧಾನಗಳ ದಿಕ್ಕರಿಸಿ ಮೂಢನಂಬಿಕೆಗಳಿಗೆ ಜೋತು ಬೀಳಬಾರದು, ಚರಂಡಿಗಳಲ್ಲಿ ನಿಂತ ನೀರನ್ನು ಮುಂದೆ ಹರಿ ಬಿಡುವ ಮೂಲಕ ಸ್ವಚ್ಛತೆಯನ್ನು ಮರೆಯಬಾರದು ಹಾಗೂ ಈ ಮಲೇರಿಯಾ ಜ್ವರವು ಹೆಣ್ಣು ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಬರುತ್ತದೆ, ಈ ಸೊಳ್ಳೆ ಕೆರೆ, ಕಟ್ಟೆ, ಬಾವಿ, ಕೃಷಿ ಹೊಂಡ, ಚೆಕ್ ಡ್ಯಾಮ್ ಮುಂತಾದ ನೀರು ಇರುವ ದೊಡ್ಡ ದೊಡ್ಡ ಸ್ಥಳಗಳಲ್ಲಿ ತನ್ನ ಸಂತಾನ ಉತ್ಪತ್ತಿಯನ್ನು ಬೆಳೆಸಿ ಮನುಷ್ಯರಿಗೆ ಕಚ್ಚುವುದರ ಮೂಲಕ ಮಲೇರಿಯಾ ಜ್ವರವು ಹರಡುತ್ತದೆ , ಈ ರೋಗದ ಲಕ್ಷಣಗಳು ಚಳಿ ವಿಪರೀತ ಜ್ವರ, ಸುಸ್ತು, ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಆರೋಗ್ಯ ಶಿಕ್ಷಣ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಸುಲೋಚನಮ್ಮ ಕೆ, ಸಮುದಾಯ ಆರೋಗ್ಯ ಅಧಿಕಾರಿ ಸ್ನೇಹ ಕೆ, ಫಾರ್ಮಸಿ ಅಧಿಕಾರಿ ಶಂಕರ್ ಟಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ವಿಕ್ರಂ, ನರ್ಸಿಂಗ್ ಅಧಿಕಾರಿ ಚಾಂದ್ ಬಿ & ಪೂರ್ಣಸಾಗರ್ ಶ್ರೀನಿವಾಸ್ ಆಶಾ ಕಾರ್ಯಕರ್ತರಾದ ಸರೋಜಮ್ಮ, ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.