April 20, 2024

Chitradurga hoysala

Kannada news portal

ಅಧಿಕಾರದಲ್ಲಿ ಇದ್ದೇವೆ ಎಂದು ಮೈಮರೆಯದೆ ಸಂಘಟನೆಗೆ ಒತ್ತು ನೀಡಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

1 min read

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವ ಮೂಲಕ ಪಕ್ಷ ಸದೃಢವಾಗಿಸಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಯುವಕರಿಗೆ ಕಿವಿ ಮಾತು ಹೇಳಿದರು.

ಬಿಜೆಪಿ.ಕಾರ್ಯಾಲಯದಲ್ಲಿ ಸೋಮವಾರ ನಡೆದ ಚಿತ್ರದುರ್ಗ ನಗರ ಮಂಡಲ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿ ಶ್ಯಾಂಪ್ರಸಾದ್‍ಮುಖರ್ಜಿ, ದೀನ್‍ದಯಾಳ್ ಉಪಾಧ್ಯ, ವಾಜಪೇಯಿ ಇವರುಗಳು ಸೇರಿ ಕಟ್ಟಿದ ಬಿಜೆಪಿಯನ್ನು ನೋಡಿ ಒಂದು ಕಾಲದಲ್ಲಿ 1-2 ಸೀಟು ಎಂದು ಗೇಲಿ ಮಾಡುತ್ತಿದ್ದ ಕಾಂಗ್ರೆಸ್‍ನವರು ಈಗ ಅಧಿಕಾರವಿಲ್ಲದೆ ವಿನಾ ಕಾರಣ ಪಕ್ಷವನ್ನು ಟೀಕಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿದೆ. ಇಂತಹ ಸಂದರ್ಭಗಳಲ್ಲಿ ಕಾರ್ಯಕರ್ತರು ಮೈಮರೆತು ಕೂರಬೇಡಿ. ಪಕ್ಷದ ಸಾಧನೆಗಳನ್ನು ಜನತೆಗೆ ಮುಟ್ಟಿಸಿ ತಳಮಟ್ಟದಿಂದ ಬಲಪಡಿಸುವ ಹೊಣೆಗಾರಿಕೆ ಪಕ್ಷದ ಎಲ್ಲಾರ ಮೇಲಿದೆ ಎಂದು ತಿಳಿಸಿದರು

About The Author

Leave a Reply

Your email address will not be published. Required fields are marked *