March 29, 2024

Chitradurga hoysala

Kannada news portal

ಕೋವಿಡ್ ‌-19 2ನೇ ಸುತ್ತಿನ ರಕ್ತದ ಮಾದರಿ ಸಂಗ್ರಹ ಭರಮಗಿರಿ ಸರ್ವೇಕ್ಷಣ ಗೆ ಐಸಿಎಂಆರ್ ತಂಡ ಭೇಟಿ,

1 min read

ಹಿರಿಯೂರ: ಹಿರಿಯೂರು ತಾಲೂಕಿನ ಭರಮಗಿರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 40 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಲಾಯಿತು.ಈ ಕಾರ್ಯಕ್ರಮಕ್ಕೆ ಜಿಲ್ಲಾ ನೋಡಲ್ ಅಧಿಕಾರಿ ಡಾಕ್ಟರ್ ಆರ್. ರಂಗನಾಥ್ ಮನೆಮನೆ ಸಮೀಕ್ಷೆಯ ಮೂಲಕ ಆಪ್ತ ಸಮಾಲೋಚನೆ ನಡೆಸಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಯೋಗಶಾಲೆ ತಂತ್ರಜ್ಞರು. 40 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಕೋವಿಡ್ -19 ಸೋಂಕಿನ ಈ ಸಮೀಕ್ಷೆಯ ಚಟುವಟಿಕೆಯನ್ನು ಸಮನ್ವಯತೆ ಯೊಂದಿಗೆ ಮೇಲ್ವಿಚಾರಣೆ ಮಾಡಲಾಯಿತು.ಆಗೋ ಕೋರೋಣ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವೃದ್ಧರು ಮಕ್ಕಳನ್ನು ಹೆಚ್ಚಿನ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಸಲಹೆ ನೀಡುವ ಮೂಲಕ ಎಲ್ಲರೂ ಮನೆಯಿಂದ ಹೊರಹೋಗುವಾಗ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು ಹಾಗೂ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು ಎಂದು ಸಲಹೆ ನೀಡಿದರು.ಈ ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯಧಿಕಾರಿ ಡಾಕ್ಟರ್. ವೆಂಕಟೇಶ್ ಮೇಲ್ವಿಚಾರಕರಾದ ನಾಗರಾಜ್ ಪ್ರಭಾಕರ್ ನವೀನ್ ವಿ ವಿ ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಕುಮಾರ್ ವೀಣಾ ಕುಮಾರ್ ಆಶಾ ಕಾರ್ಯಕರ್ತೆ ಫರಿದ ಬೇಗಮ್ ಅಂಗನವಾಡಿ ಕಾರ್ಯಕರ್ತೆ ನಾಗಮ್ಮ. ಗ್ರಾಮ ಪಂಚಾಯಿತಿ ಪಿಡಿಓ ಅನ್ಸಿರ ಬಾನು ಕಾರ್ಯದರ್ಶಿಯಾದ ಹಸಿನ ಖಾನಂಪೊಲೀಸ್ ಇಲಾಖೆಯ ಪಿಎಸ್ಐ ಶಶಿಕಲಾ ಸರ್ವೋತ್ತಮ ರೆಡ್ಡಿ ಜಯರಾಮ್ ಗೋವಿಂದಪ್ಪ ಚೇತನ ಚಾರ್ಯ ಹಾಲೇಶಪ್ಪ ಸುನಿಲ್ ಹಾಗೂ ಭರಮಗಿರಿ ಗ್ರಾಮಸ್ಥರ ಇದ್ದರು.

About The Author

Leave a Reply

Your email address will not be published. Required fields are marked *