April 25, 2024

Chitradurga hoysala

Kannada news portal

ರಾಮನಿಗೆ ಸಿಗುವ ಗೌರವ ವಾಲ್ಮೀಕಿಗೆ ಸಿಗುತ್ತಿಲ್ಲ:ವಾಲ್ಮೀಕಿ ಶ್ರಿ ಕಿಡಿ

1 min read

ಹರಿಹರ: ರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ದೇಶದ ಅಧಿಕಾರ ಹಿಡಿಯುವ ರಾಜಕಾರಣಿಗಳು ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿಗಳ ಬಗ್ಗೆ ಏಕೆ ಗೌರವ ತೋರುತ್ತಿಲ್ಲ ಎಂದು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ರಾಜನಹಳ್ಳಿ ಗುರುಪೀಠದಲ್ಲಿ ಭಾನುವಾರ ನಡೆದ ಸಮಾಜದ ರಾಜ್ಯ ಮಟ್ಟದ ಸಭೆಯಲ್ಲಿ ಮಾತನಾಡಿದ ಶ್ರೀಗಳು, ರಾಮನ ಹೆಸರಿನಲ್ಲಿ ಅಧಿಕಾರಕೇರಿದವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿದ್ದಾರೆ.ಅದೇ ರೀತಿ ಜಗತ್ತಿಗೆ ಶ್ರೀರಾಮನನ್ನು ಪರಿಚಯಿಸಿದ ವಾಲ್ಮೀಕಿ ಮಹರ್ಷಿಗಳ ದೇವಸ್ಥಾನವನ್ನೂ ಅಲ್ಲಿಯೇ ನಿರ್ಮಿಸಬೇಕು ಆಗ ಮಾತ್ರ ಕುಲ ಗುರುವಿಗೆ ಸ್ಥಾನ ಸಿಕ್ಕಾಂತಾಗುತ್ತದೆ, ವಾಲ್ಮೀಕಿ ಸಮಾಜದವರಿಗೆ ನ್ಯಾಯಯುತ ಮೀಸಲಾತಿ ನೀಡಲು ಜಾಣ ಕಿವುಡುತನ ತೋರಿದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕಿಡಿಕಾರಿದರು.

About The Author

Leave a Reply

Your email address will not be published. Required fields are marked *