ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು.
1 min readವಿಜಯಪುರ/ಸಿಂದಗಿ: ಶಾಹಪೂರ ರೋಡ್ ಯಂಕಂಚಿ ಗ್ರಾಮದ ಬಳಿ ಬಸ್, ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರರು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ಮೃತ ದುರ್ದೈವಿಗಳಾದ 1) ತಿಪ್ಪಣ್ಣ, ಮಲ್ಲಪ್ಪ, ಬ್ಯಾಕೋಡ, ಕೊಕಟನೂರ ಗ್ರಾಮದ ನಿವಾಸಿ (ವಯಸ್ಸು 28) ಮೃತಪಟ್ಟಿದ್ದಾನೆ ಹಾಗೂ 2) ರಮೇಶ್, ಗೌಡಪ್ಪ, ಮುಳಸಾವಳಗಿ, (ವಯಾ 35) ಯಂಕಂಚಿ ಗ್ರಾಮದ ನಿವಾಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಹಾಗೂ 3) ಶಿವಾನಂದ,ನಿಂಗಪ್ಪ, ಕುರನಳ್ಳಿ, (ವಯಸ್ಸು 30) ಈತ ಗಂಭೀರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಈ ಕುರಿತು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.