ರಾಮ ಮಂದಿರ ನಿರ್ಮಾಣದ ತಂಡದಲ್ಲಿ ಚಳ್ಳಕೆರೆ ಸೀತಾರಾಂ: ಸಚಿವ ಶ್ರೀರಾಮುಲು ಹರ್ಷ
1 min readಚಿತ್ರದುರ್ಗ: ರಾಮ ಮಂದಿರ ನಿರ್ಮಾಣದ ತಾಂತ್ರಿಕ ತಂಡದಲ್ಲಿ ಚಳ್ಳಕೆರೆಯ ಪ್ರೊ.ಟಿ.ಜಿ. ಸೀತಾರಾಮ್ ಅವರಿಗೆ ಸ್ಥಾನ ಸಿಕ್ಕಿರುವುದು ಜಿಲ್ಲೆಗೆ ಗೌರವವನ್ನು ಹೆಚ್ಚಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸಂತಸ ವ್ಯಕ್ತಪಡಿಸಿದರು.
ಗಣರಾಜ್ಯೋತ್ಸವದ ಅಂಗವಾಗಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ 72 ನೇ ಗಣರಾಜ್ಯದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಶಕ್ತಿಯ ಮೂಲಕ ಸಾಮಾನ್ಯ ವ್ಯಕ್ತಿಯ ಮಕ್ಕಳು ಸಹ ಐಎಎಸ್, ಐಪಿಎಸ್ ಅಧಿಕಾರಿ ಆಗುತ್ತಾರೆ. ನಮ್ಮಂಥಹ ಸಾಮಾನ್ಯರು ಮಂತ್ರಿಯಾಗಿದ್ದೇವೆ ಎಂದರೆ ಇದಕ್ಕೆ ಸಂವಿಧಾನ ನೀಡಿದ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಕಾರಣ. ಗಣರಾಜ್ಯೋತ್ಸವ ಅಂದರೆ ಜನರ ಉತ್ಸವ, ಈ ದೇಶದ ಹಬ್ಬವನ್ನು ಎಲ್ಲಾರೂ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.