April 18, 2024

Chitradurga hoysala

Kannada news portal

ಮನೆ ಕೆಲಸ ಮಾಡುವ ಕಾರ್ಮಿಕರಿಗೆ ಐದು ಸಾವಿರ ರೂ.ಗಳ ಪರಿಹಾರ ಘೋಷಿಸಿ…

1 min read

ಚಿತ್ರದುರ್ಗ:

ಕೋವಿಡ್-೧೯ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಿಸಿರುವ ಸರ್ಕಾರ ಗೃಹ ಕಾರ್ಮಿಕರಿಗೆ ಐದು ಸಾವಿರ ರೂ.ಗಳ ಪರಿಹಾರ ಘೋಷಿಸುವಂತೆ ಕರ್ನಾಟಕ ಗೃಹ ಕಾರ್ಮಿಕರ ಸಂಘದಿಂದ ಸೋಮವಾರ ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪನವರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕೊರೋನಾ ವೈರಸ್ ದೇಶವನ್ನು ಕಾಡುತ್ತಿರುವುದರಿಂದ ಗೃಹ ಕಾರ್ಮಿಕರು ಅದರಲ್ಲಿಯೂ ಮನೆ ಕೆಲಸ ಮಾಡುವ ಹೆಚ್ಚು ಹೆಣ್ಣು ಮಕ್ಕಳು ದುಡಿಮೆಯಿಲ್ಲದೆ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಕುಟುಂಬದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ವಿಧವೆಯರು ಸಾಕಷ್ಟಿದ್ದಾರೆ. ಅದಕ್ಕಾಗಿ ಹಲವು ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಘೋಷಿಸಿರುವ ರಾಜ್ಯದ ಮುಖ್ಯಮಂತ್ರಿ ಗೃಹ ಕಾರ್ಮಿಕರಿಗೆ ತಕ್ಷಣವೇ ಪರಿಹಾರ ಘೋಷಿಸಿ ಸಾಮಾಜಿಕ ಭದ್ರತೆ ಒದಗಿಸುವಂತೆ ಕರ್ನಾಟಕ ಗೃಹ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಗಣೇಶ್ ಒತ್ತಾಯಿಸಿದರು.

About The Author

Leave a Reply

Your email address will not be published. Required fields are marked *