ಹಿರಿಯೂರು ಬಳಿ ಬೀಕರ ಅಪಘಾತ ವಿಧಿಯಾಟಕ್ಕೆ ಇಬ್ಬರು ಬಲಿ.
1 min readಹಿರಿಯೂರು: ದಿನಾಂಕ:07.04.2021 ರಂದು ಬೆಳಗಿನ ಜಾವ ಸುಮಾರು 2.30 ಗಂಟೆ ಸಮಯದಲ್ಲಿ ಹಿರಿಯೂರು ನಗರ ಠಾಣಾ ವ್ಯಾಪ್ತಿಯ ಚಳ್ಳಕೆರೆ ರಸ್ತೆಯ 150 (A) ರಸ್ತೆಯಲ್ಲಿ ಪುರದ ಮಠ ಕ್ರಾಸ್ ಹತ್ತಿರ ಹಿರಿಯೂರು ಕಡೆಯಿಂದ ಆರ್ ಕೆ ಪವರ್ ಜಿನ್ ಫ್ಯಾಕ್ಟರಿಗೆ ಸೌದೆ ತುಂಬಿಕೊಂಡು ಹೋಗುತ್ತಿದ್ದ K.A. 01 C 9430 ನೇ ಲಾರಿಗೆ ಹಿಂದಿನಿಂದ ಇದೇ ಮಾರ್ಗವಾಗಿ ಚಲಿಸುತ್ತಿದ್ದ ಬೆಂಗಳೂರಿನ ಸಂಜೀವ ನಗರದಿಂದ ಬಳ್ಳಾರಿ ಹತ್ತಿರ ಇರುವ ಪಾಂಡುರಂಗ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿದ್ದ K.A 04. MR 1608 ನೇ ಕಾರಿನ ಚಾಲಕ ಅತಿವೇಗ ಹಾಗೂ ಅಜಾಗರುಕತೆಯಿಂದ ನಡೆಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನಲ್ಲಿದ್ದ 5 ಜನರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಮೃತರ ಶವಗಳು ಹಿರಿಯೂರು ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಇರುತ್ತವೆ. ಈ ಬಗ್ಗೆ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಾಗಿರುತ್ತದೆ ಸರ್.
ಮೃತರು
- ಕುಮಾರ ಅಲಿಯಾಸ್ ವೆಂಕಟರಾಮಯ್ಯ ತಂದೆ ವೆಂಕಟೇಶ್ ಸುಮಾರು 48 ವರ್ಷ ಗೆದ್ದಲಹಳ್ಳಿ ಬೆಂಗಳೂರು
- ದೇವರಾಜ ತಂದೆ ಚಿಕ್ಕ ನಂಜಯ್ಯ ಸುಮಾರು 38 ವರ್ಷ ಗೆದ್ದಲಹಳ್ಳಿ ಬೆಂಗಳೂರು
ಗಾಯಾಳುಗಳು
- ಜಯರಾಮ್
- ಗಿರೀಶ್
- ಶ್ರೀನಿವಾಸ್
( ಇವರುಗಳನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತಾರೆ)