April 18, 2024

Chitradurga hoysala

Kannada news portal

4 ಆಟೋ ,ಟಿಪ್ಪರ್ ಲೋಕಾರ್ಪಣೆ ನಗರಸಭೆಗೆ ನೀಡಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್.

1 min read

ಹಿರಿಯೂರು ನಗರಸಭೆ ಕಾರ್ಯಾಲಯದಲ್ಲಿ ಇಂದು ಶಾಸಕರಾದ ಕೆ. ಪೂರ್ಣಿಮಾ ಶ್ರೀನಿವಾಸ್ ರವರು ತೆರಿಗೆ ಪಾವತಿ ಕೇಂದ್ರ ಉದ್ಘಾಟನೆ ನೆರವೇರಿಸಿದರು. 4 ಆಟೋ ಟಿಪ್ಪರ್ ಲೋಕಾರ್ಪಣೆ ಮಾಡಲಾಯಿತು. ಕಸದ ಬಕೇಟ್ ವಿತರಣೆ ಗೆ ಚಾಲನೆ ನೀಡಲಾಯಿತು. ನಂತರ ಕರೋನ ಜಾಗೃತಿ ಅಭಿಯಾನ ನಡೆಯಿತು. ಮಾಸ್ಕ್ ಧರಿಸುವುದು, ಸಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಫಲಕ ಗಳನ್ನು ಪ್ರದರ್ಶಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ರಾದ ರಾಜೇಶ್ವರಿ, ನಗರಸಭೆ ಅಧ್ಯಕ್ಷ ರಾದ ಶಂಶುನ್ನೀಸಾ ಉಪಾಧ್ಯಕ್ಷ ರಾದ ಬಿ ಎನ್ ಪ್ರಕಾಶ್ ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಚಿತ್ರಜಿತ್ ಯಾದವ್ ಹಾಗೂ ಸದಸ್ಯರು ಪೌರಾಯುಕ್ತ ರಾದ ಟಿ ಲೀಲಾವತಿ ಕಂದಾಯ ಅಧಿಕಾರಿ ಜಯಣ್ಣ ಹಾಗೂ ಸಿಬ್ಬಂದಿ ವರ್ಗದವರು ಟಿ ಹೆಚ್ ಓ ಡಾ. ವೆಂಕಟೇಶ್ ಹಾಗೂ ಅನೇಕ ಯುವ ಮುಖಂಡರು ಉಪಸ್ಥಿತರಿದ್ದರು..

About The Author

Leave a Reply

Your email address will not be published. Required fields are marked *