April 25, 2024

Chitradurga hoysala

Kannada news portal

ಶಾಲಾ ಕಾಲೇಜು ಪ್ರಾರಂಭ ಮಾಡಿ : ವೈ ಎ ಎನ್ : ಚಿತ್ರದುರ್ಗ:

1 min read

ಶಾಲಾ ಕಾಲೇಜು ಪ್ರಾರಂಭ ಮಾಡಿ : ವೈ ಎ ಎನ್ ಚಿತ್ರದುರ್ಗ:

ಶಾಲಾ ಕಾಲೇಜು ಪ್ರಾರಂಭ ಮಾಡಿ : ವೈ ಎ ಎನ್ ಚಿತ್ರದುರ್ಗ:

ಈಗಾಗಲೇ 15 ತಿಂಗಳು ಮಕ್ಕಳಿಗೆ ಶಾಲೆ ಇಲ್ಲದೆ ಮನೆಯಲ್ಲಿಯೇ ಇದ್ದಾರೆ, ಇನ್ನೂ ಸಹಾ ಮನೆಯಲ್ಲಿಯೇ ಇದ್ದರೆ ಮುಂದಿನ ದಿನ ಕಷ್ಟವಾಗಬಹುದಾಗಿದೆ ಈ ಹಿನ್ನಲೆಯಲ್ಲಿ ಸರ್ಕಾರ ಶಾಲಾ-ಕಾಲೇಜನ್ನು ಪ್ರಾರಂಭ ಮಾಡಬೇಕೆಂದು ಆಡಳಿತ ಪಕ್ಷದ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬದುಕಿನಲ್ಲಿ ಈ ರೀತಿಯಾದ ಅಲೆಯೊಂದು ಬರುತ್ತದೆ ಎಂದು ಯಾರು ಸಹಾ ಎಣಿಸಿರಲಿಲ್ಲ, ಆದರೆ ಬಂದಿದೆ ಇದನ್ನು ಎದುರಿಸಲೇ ಬೇಕು, ಈಗಾಗಲೇ ಮೂದಲನೆ ಬಂದು ಹೋಗಿ ಈಗ ಎರಡನೇ ಅಲೆ ಪ್ರಾರಂಭವಾಗಿ ಕೂನೆಯಲ್ಲಿದ್ದ, ಮೂರನೇ ಅಲೆ ಬರುತ್ತದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಮೊದಲು ಸರ್ಕಾರ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕೋವಿಡ್-19 ಲಸಿಕೆಯನ್ನು ಹಾಕುವುದರ ಮೂಲಕ ಶಾಲೆಗಳನ್ನು ಪ್ರಾರಂಭ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರೋನಾ ಜೊತೆಯಲ್ಲಿ ಬದುಕುವುದನ್ನು ಕಲಿಯಬೇಕೆಂದು ಪ್ರಧಾನ ಮಂತ್ರಿಗಳು ತಿಳಿಸಿದ್ದಾರೆ. ಶಿಕ್ಷಕರನ್ನು ಪ್ರಥಮ ವಾರಿಯಸ್ಸ್ ಎಂದು ಗುರುತಿಸಿ ಲಸಿಕೆಯನ್ನು ನೀಡಬೇಕಿದೆ. ಆನ್‍ಲೈನ್ ತರಗತಿ ಶಾಲೆಯಲ್ಲಿ ಕಲಿಯುವುದಕ್ಕೆ ವ್ಯತ್ಯಾಸ ಇದೆ. ಶಾಲೆಯಲ್ಲಿ ಶಿಕ್ಷಕರೊಂದಿಗೆ ಮಕ್ಕಳು ಬೆರತು ಕಲಿಯುವುದು ಅಗತ್ಯವಾಗಿದೆ. ಸರ್ಕಾರ ಲಸಿಕೆಯನ್ನು ನೀಡುವುದರ ಮೂಲಕ ಶಾಲೆಯನ್ನು ಪ್ರಾರಂಭ ಮಾಡುವುದು ಅಗತ್ಯವಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.

About The Author

Leave a Reply

Your email address will not be published. Required fields are marked *