*ಪದವಿಧರ,ಶಿಕ್ಷಕರ ವಿಭಾಗದ ಬರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಮಣ್ಣ ಕೊಗುಂಡೆ ಆಯ್ಕೆ*
1 min read*ಪದವಿಧರ,ಶಿಕ್ಷಕರ ವಿಭಾಗದ ಬರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಮಣ್ಣ ಕೊಗುಂಡೆ ಆಯ್ಕೆ* ಚಿತ್ರದುರ್ಗ : ಕರ್ನಾಟಕ ರಾಜ್ಯ ಶಿಕ್ಷಕರ ಹಾಗೂ ಪದವೀಧರ ವಿಭಾಗದ ಬರಮಸಾಗರ ಬ್ಲಾಕ್ ಅಧ್ಯಕ್ಷರಾಗಿ ಕೊಗುಂಡೆ ರಾಮಣ್ಣನವರನ್ನು ರಾಜ್ಯಾಧ್ಯಕ್ಷರಾದ ಡಾ.ಎಂ ಆರ್ ಕುಬೇರಪ್ಪನವರು ಚಿತ್ರದುರ್ಗ ಡಿಸಿಸಿ ಅಧ್ಯಕ್ಷರಾದ ತಾಜ್ ಪೀರ್ ರವರ ಅನುಮೋದನೆಯೊಂದಿಗೆ ಚಿತ್ರದುರ್ಗ ಶಿಕ್ಷಕರ ಮತ್ತು ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ರಾದ ಮುದಸಿರ್ ನವಾಜ್ ಅವರು ರಾಮಣ್ಣ ರವರನ್ನು ನೇಮಕ ಮಾಡಿ , ಆಯ್ಕೆಯಾಗಿರುವ ತಾವು ಈ ಮೂಲಕ ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ್ನು ಬಲ ಪಡಿಸುವ ಮೂಲಕ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಬೆಳೆಯಲು ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಸಹಕರಿಸಬೇಕು ಎಂದು ಈ ಮೂಲಕ ಕೋರಿದ್ದಾರೆ.