*ನಾರಾಯಣಸ್ವಾಮಿಯವರಿಗೆ ಕೇಂದ್ರ ಸಚಿವ ಸ್ಥಾನ ನೀಡಲು ಒತ್ತಾಯ*
1 min read*ನಾರಾಯಣಸ್ವಾಮಿಯವರಿಗೆ ಕೇಂದ್ರ ಸಚಿವ ಸ್ಥಾನ ನೀಡಲು ಒತ್ತಾಯ*
ಚಿತ್ರದುರ್ಗ : ಕೇಂದ್ರ ಸಂಪುಟ ಪುನರ್ ರಚನೆಯಲ್ಲಿ ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ರವರನ್ನು ಸೇರ್ಪಡೆ ಮಾಡುವಂತೆ ಬುಧವಾರ ಚಿತ್ರದುರ್ಗ ಲೋಕಸಭಾ ಮಾದಿಗ ಸಮುದಾಯದ ಮುಖಂಡರು ಪ್ರಧಾನಿ ಮಂತ್ರಿ ಗಳಿಗೆ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರವರಿಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ .
ಎ.ನಾರಾಯಣ ಸ್ವಾಮಿ ರವರು ನಾಲ್ಕು ಬಾರಿ ಶಾಸಕರಾಗಿ ಕಳೆದ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿರುವ ಫಲದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿಸಿದ್ದರಿಂದ ಸುಮಾರು ಆರು ಲಕ್ಷ ಅಧಿಕ ಮತ ಪಡೆದು ಸಂಸದರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿರುವ ಅನುಭವ ಹೊಂದಿರುವ ಎ.ನಾರಾಯಣ ಸ್ವಾಮಿ ರಾಜ್ಯದ ಮಾದಿಗ ಸಮುದಾಯದ ಜನಪ್ರಿಯ ನಾಯಕರು ಹಾಗೆಯೇ ಸಮಯದಲ್ಲಿ ಬದ್ದತೆ ಮತ್ತು ಸಾಮಾಜಿಕ ಕಳಕಳಿಯ ನಾಯಕರೆನಿಸಿಕೊಂಡಿದ್ದು ಮಾದಿಗ ಸಮುದಾಯವು ಸಹ ಬಿಜೆಪಿ ಪಕ್ಷಕ್ಕೆ ಎಲ್ಲಾ ಚುನಾವಣೆಯಲ್ಲಿ ನಿಷ್ಠೆಯಿಂದ ಬೆಂಬಲ ನೀಡುತ್ತ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕೇಂದ್ರ ಸರ್ಕಾರವು ಮಂತ್ರಿ ಮಂಡಲ ಪುನರ್ ರಚನೆ ಮಾಡುವಾಗ ಸಂಸದ ಎ.ನಾರಾಯಣ ಸ್ವಾಮಿ ರವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು .
ಮುಖಂಡರಾದ ಡಿ.ಓ.ಮುರಾರ್ಜಿ, ಹೊಳಲ್ಕೆರೆ ಡಿ.ಆರ್. ಪಾಂಡುರಂಗ ಸ್ವಾಮಿ, ಟಿ.ದೇವರಾಜ್, ತಾ.ಪಂ.ಮಾಜಿ ಸದಸ್ಯ ಹನುಮಂತಪ್ಪ, ಕರಿಕೆರೆ ತಿಪ್ಪೇಸ್ವಾಮಿ, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ, ಪಾವಗಡ ಶಿವಕುಮಾರ್ ಸಾಕೇಲ್, ಶಿರಾ ರವಿಕುಮಾರ್, ನಾಯಕನಹಟ್ಟಿ ಶಿವದತ್ತ, ಹೊಟ್ಟೆಪ್ಪನಹಳ್ಳಿ ಮಾರುತಿ ಇತರರು ಉಪಸ್ಥಿತರಿದ್ದರು.