April 19, 2024

Chitradurga hoysala

Kannada news portal

*ಡಾ.ಸಿದ್ಧಲಿಂಗಯ್ಯನವರಿಗೆ ಭಾವಪೂರ್ಣ ನುಡಿನಮನ*

1 min read

*ಡಾ.ಸಿದ್ಧಲಿಂಗಯ್ಯನವರಿಗೆ ಭಾವಪೂರ್ಣ ನುಡಿನಮನ* ___________________
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಕ್ಕಳ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಇವರುಗಳ ಆಯೋಜಕತ್ವದಲ್ಲಿ ಜನಕವಿ ಡಾ.ಸಿದ್ಧಲಿಂಗಯ್ಯರವರಿಗೆ ಭಾವಪೂರ್ಣ ಕಾವ್ಯ ನುಡಿನಮನ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಅಂತರ್ಜಾಲದ ಮುಖೇನ ದಿನಾಂಕ 3 ಜುಲೈ 2021 ರ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕೇಶ್ ಉಪಾಧ್ಯಾಯರು ಅಧ್ಯಕ್ಷರು ಕಸಾಪ ಹೊಳಲ್ಕೆರೆ ವಹಿಸಿಕೊಂಡಿರುತ್ತಾರೆ. ಪ್ರೋ. ಡಿ.ಅಂಜಿನಪ್ಪ ಚಳ್ಳಕೆರೆ ಮತ್ತು ಡಾ.ಶಿವರಾಜ್ ಬ್ಯಾಡರಹಳ್ಳಿ ಬೆಂಗಳೂರು ಇವರು ಕವಿಗೆ ನುಡಿನಮನ ಸಲ್ಲಿಸುವರು. ಕಾವ್ಯ ನಮನದಲ್ಲಿ ನಾಡಿನ ಕವಿಗಳಾದ ಚಂದ್ರಶೇಖರ ತಾಳ್ಯ, ತಾಳ್ಯದ ವೇದಮೂರ್ತಿ, ಮೋದೂರು ತೇಜ, ಹೆಚ್. ಆನಂದಕುಮಾರ, ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು, ರೇಣುಕಾ ಚಿತ್ರದುರ್ಗ, ದಾಮಿನಿ ರಂಗಸ್ವಾಮಿ, ಲಕ್ಷ್ಮೀಕಾಂತ ಮಿರಜ್ಕರ್, ಡಿ.ಶಿವರಾಜ್, ಉಮೇಶ್ ಬಾಬು ಮಠದ, ಷಫೀವುಲ್ಲಾ, ಗುರುಲಿಂಗೇಶ್ ಇಳಕಲ್, ಡಾ.ವಿರೂಪಾಕ್ಷ, ವೆಂಕಟರಮಣ ಮೈಸೂರು ಹಾಗೂ ಎಲ್ಲ ಸಹೃದಯ ಕನ್ನಡ ಬಾಂಧವರು ಭಾಗವಹಿಸುವರು ಎಂದು ಹೊಳಲ್ಕೆರೆ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಟಿ.ಪಿ.ಉಮೇಶ್ ರವರು ತಿಳಿಸಿರುತ್ತಾರೆ.

About The Author

Leave a Reply

Your email address will not be published. Required fields are marked *