April 20, 2024

Chitradurga hoysala

Kannada news portal

ಮೋದಿ ಸಂಪುಟದಲ್ಲಿ ಎಡಗೈ ಸಮುದಾಯದ ನಾಯಕ ಎ.ನಾರಾಯಣಸ್ವಾಮಿಗೆ ಸ್ಥಾನ.?

1 min read

ಮೋದಿ ಸಂಪುಟದಲ್ಲಿ ಎಡಗೈ ಸಮುದಾಯದ ನಾಯಕ ಎ.ನಾರಾಯಣಸ್ವಾಮಿಗೆ ಸ್ಥಾನ.?

ಚಿತ್ರದುರ್ಗ ಹೊಯ್ಸಳ:

ಕೇಂದ್ರ ಸಚಿವ ಸಂಪುಟದ ಪುನರ್ ರಚನೆ ಮುಂದಿನ ವಾರ ನಡೆಯಲಿದೆ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮೋದಿ ಸಂಪುಟದಲ್ಲಿ ಎಡಗೈ ನಾಯಕರೊಬ್ಬರಿಗೆ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕರ್ನಾಟಕದ ಎಡಗೈ ಸಮುದಾಯದ ನಾಯಕ ನಾರಾಯಣಸ್ವಾಮಿಗೆ ಸ್ಥಾನ ನೀಡಲಾಗುತ್ತಿದೆ ಎನ್ನಲಾಗಿದೆ.

ಹೌದು.. ಕೇಂದ್ರ ಸಂಪುಟದಲ್ಲಿ ಎಡಗೈ ಸಮುದಾಯದ ನಾಯಕ ನಾರಾಯಣಸ್ವಾಮಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ವರಿಷ್ಠರು ಅವರಿಗೆ ಬುಲಾವ್ ನೀಡಲಾಗಿದ್ದು, ಇಂದು ಮಧ್ಯಾಹ್ನವೇ ನಾರಾಯಣಸ್ವಾಮಿ ದೆಹಲಿಗೆ ಕುಟುಂಬ ಸಮೇತರಾಗಿ ತೆರಳು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.ಅಂದಹಾಗೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಮುಂದಿನ ವಾರ ವಿಸ್ತರಣೆ ಆಗಲಿದೆ ಎನ್ನಲಾಗಿದೆ. ಇವರೊಂದಿಗೆ ಕರ್ನಾಟಕದ ಎಡಗೈ ಸಮುದಾಯದ ನಾಯಕ ನಾರಾಯಣಸ್ವಾಮಿಗೂ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಪತ್ನಿ ವಿಜಯ, ಪುತ್ರಿ ಶೀತಲ್ ಸೇರಿದಂತೆ ಕುಟುಂಬ ಸಮೇತರಾಗಿ ದೆಹಲಿಗೆ ತೆರಳೋದಕ್ಕೆ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

About The Author

Leave a Reply

Your email address will not be published. Required fields are marked *