April 25, 2024

Chitradurga hoysala

Kannada news portal

*ನೂತನ ಕೇಂದ್ರ ಮಂತ್ರಿ ಎ ನಾರಾಯಣಸ್ವಾಮಿ* (ಇಂದು ಸಂಜೆ ಕೇಂದ್ರ ಸಚಿವ ಸಂಪುಟ ಪ್ರಮಾಣವಚನ ಚಿತ್ರದುರ್ಗಕ್ಕೆ ಒಲಿದು ಬಂತು ಅದೃಷ್ಟ!)

1 min read
ಸಂಸದ ಆನೇಕಲ್ ಎ.ನಾರಾಯಣಸ್ವಾಮಿಗೆ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಕ್ಕಾ ಆಗಿದ್ದು ಇಂದು ಸಂಜೆ ಪ್ರಮಾಣ ವಚನ

*ನೂತನ ಕೇಂದ್ರ ಮಂತ್ರಿ ಎ ನಾರಾಯಣಸ್ವಾಮಿ* (ಇಂದು ಸಂಜೆ ಕೇಂದ್ರ ಸಚಿವ ಸಂಪುಟ ಪ್ರಮಾಣವಚನ ಚಿತ್ರದುರ್ಗಕ್ಕೆ ಒಲಿದು ಬಂತು ಅದೃಷ್ಟ!) _________________ಚಿತ್ರದುರ್ಗ : ಸಚಿವ ಸಂಪುಟ ವಿಸ್ತರಣೆ ಯಾಗುತ್ತಿರುವ ಬೆನ್ನಲ್ಲೇ, ಇಬ್ಬರು ಹಾಲಿ ಸಚಿವರು ಸಂಪುಟಕ್ಕೆ ರಾಜೀನಾಮೆ ನೀಡಿದ ಸಚಿವರು, ಸಂತೋಷ್ ಗಂಗ್ವಾರ್‌ ಹಾಗೂ ರಮೇಶ್‌ ಪೋಕ್ರಿಯಾಲ್‌ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಸಂತೋಷ್‌ ಗಂಗ್ವಾರ್‌ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ರಮೇಶ್‌ ಪೋಕ್ರಿಯಾಲ್‌ ಶಿಕ್ಷಣ ಸಚಿವರಾಗಿದ್ದರು.
ಸಂಜೆಯೊಳಗಾಗಿ ಇನ್ನಷ್ಟು ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆನ್ನಲಾಗಿದ್ದು, ಸಂಪುಟ ಪುನಾರಚನೆ ವೇಳೆ ಹೊಸ ಮುಖಗಳಿಗೆ ಮನ್ನಣೆ ನೀಡಲು ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಿದ್ದಾರೆನ್ನಲಾಗಿದೆ.
ಎ.ನಾರಾಯಣ ಸ್ವಾಮಿ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಮಾದಿಗ ಸಮುದಾಯದ ಮುಖಂಡರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬಿ.ಎಸ್​.ಯಡಿಯೂರಪ್ಪಗೆ ಪತ್ರ ಬರೆಯುವ ಮೂಲಕ ಒತ್ತಡ ಹೇರಿದ್ದರು.

ನಾರಾಯಣಸ್ವಾಮಿ ಅವರು ಅನಿವಾರ್ಯವಾಗಿ 2019ರಲ್ಲಿ ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಿದರು ಆದರೆ ಅಂದು ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಇವರ ಪರವಾಗಿ  ಚುನಾವಣೆ ಮಾಡಿದ್ದರ ಫಲವಾಗಿ ಈ ಜಿಲ್ಲೆ ಗೆ ಒಬ್ಬ ಮಾದಿಗರು ಕೇಂದ್ರ ಸರ್ಕಾರದ ಮಂತ್ರಿಯಾಗುತ್ತಿದ್ದಾರೆ.
ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದ ಆನೇಕಲ್ ಎ.ನಾರಾಯಣಸ್ವಾಮಿಗೆ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಕ್ಕಾ ಆಗಿದ್ದು ಇಂದು ಸಂಜೆ ಪ್ರಮಾಣ ವಚನ ಸಮಾರಂಭ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಚಿತ್ರದುರ್ಗದ ಲೋಕಸಭಾ ಕ್ಷೇತ್ರದ ರಾಜಕೀಯ ಇತಿಹಾಸ ಗಮನಿಸಿದಾಗ ನಾರಾಯಣಸ್ವಾಮಿ ಕೇಂದ್ರ ಮಂತ್ರಿ ಆಗುತ್ತಿರುವುದು ದಾಖಲೆಯಾಗಿ ಇತಿಹಾಸ ಸೇರಲಿದೆ.

About The Author

Leave a Reply

Your email address will not be published. Required fields are marked *