*ಪ್ರಾಮಾಣಿಕತೆ ಮರೆದ ಆಟೋಚಾಲಕ ಸೈಯದ್ ಯಾಹಿಯಾ:ಜಿಲ್ಲಾ ಪೊಲೀಸ್ ಅಧೀಕ್ಷಕಿ ರಾಧಿಕಾ.ಜಿ ಸನ್ಮಾನ*
1 min read*ಪ್ರಾಮಾಣಿಕತೆ ಮರೆದ ಆಟೋಚಾಲಕ ಸೈಯದ್ ಯಾಹಿಯಾ:ಜಿಲ್ಲಾ ಪೊಲೀಸ್ ಅಧೀಕ್ಷಕಿ ರಾಧಿಕಾ.ಜಿ ಸನ್ಮಾನ*
ಚಿತ್ರದುರ್ಗ ನಗರ ಆಶ್ರಯ ಬಡಾವಣೆ 2 ನೇ ಹಂತದ ನಿವಾಸಿ ಆಟೋ ಚಾಲಕ ಸೈಯದ್ ಯಾಹಿಯಾ ಪ್ರಮಾಣಿಕತೆ ಮೆರೆದು ಪೊಲೀಸರಿಂದ ಪ್ರಶಂಸನೆಗೆ ಒಳಗಾದ ವ್ಯಕ್ತಿ. ಇವರು ಸುಮಾರು 16 ವರ್ಷಗಳಿಂದ ಚಿತ್ರದುರ್ಗ ನಗರದಲ್ಲಿ ಆಟೋ ರಿಕ್ಷಾ ಚಾಲಕನಾಗಿ ಜೀವನ ಸಾಗಿಸುತ್ತಿದ್ದು, ಕರೋನಾ ಲಾಕ್ಡೌನ್ನಿಂದಾಗಿ ತಾನು ಸಹ ಆರ್ಥಿಕ ಸಂಕಷ್ಟದಲ್ಲಿದ್ದರೂ, ಅನ್ಯರ ಬೆಲೆ ಬಾಳುವ ಬಂಗಾರದ ಒಡವೆಗಳು ಹಾಗೂ 2 ಮೊಬೈಲ್ಗಳಿಗೆ ಆಸೆ ಪಡೆದೇ ಚಿತ್ರದುರ್ಗ ನೆಹರೂ ನಗರದ ನಿವಾಸಿ ಶ್ರೀಮತಿ ಹರಿಪ್ರಿಯ ಎಂಬುವವರು ದಿನಾಂಕ.29.06.2021 ರಂದು ಸಂಜೆ ಸುಮಾರು 5.30 ಗಂಟೆ ಸಮಯದಲ್ಲಿ ಚಂದ್ರವಳ್ಳಿಯಿಂದ ತನ್ನ ಮನೆಗೆ ಸೈಯದ್ ಯಾಹಿಯಾ ರವರ ಆಟೋರಿಕ್ಷಾ ಹತ್ತಿಕೊಂಡು ಬಂದು ಇಳಿಯುವಾಗ ಯಾವುದೋ ಜ್ಞಾನದಲ್ಲಿ ತನ್ನ ವ್ಯಾನಿಟಿ ಬ್ಯಾಗನ್ನು ಆಟೋದಲ್ಲಿ ಬಿಟ್ಟು ಹೋಗಿದ್ದರು. ಹರಿಪ್ರಿಯಾ ರವರ ವ್ಯಾನಿಟಿ ಬ್ಯಾಗ್ನಲ್ಲಿ ಎರಡೂವರೆ ಲಕ್ಷ ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರ ಹಾಗೂ ಬೆಲೆ ಬಾಳುವ ಎರಡು ಮೊಬೈಲ್ ಪೋನ್ಗಳಿದ್ದು, ಸದರಿಯವುಗಳನ್ನು ಸೈಯದ್ ಯಾಹಿಯಾ ರವರು ಹರಿಪ್ರಿಯ ರವರಿಗೆ ಹಿಂದಿರುಗಿಸಿ ತನ್ನ ಪ್ರಾಮಾಣಿಕತೆ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸದರಿ ಆಟೋ ಚಾಲಕನಾದ ಸೈಯದ್ ಯಾಹಿಯಾ ರವರ ಪ್ರಾಮಾಣಿಕತೆಯನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಾಧಿಕಾ.ಜಿ. ಐ.ಪಿ.ಎಸ್. ರವರು ಪ್ರಶಂಸಿಸಿ ಸನ್ಮಾನ ಮಾಡಿ ಗೌರವಿಸಿರುತ್ತಾರೆ.