C.I.D SP ರವಿ ಡಿ ಚನ್ನಣ್ಣನವರ್ IPS ಅವರು ಚಿತ್ರದುರ್ಗ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನಕ್ಕೆ ಭೇಟಿ.
1 min readC.I.D SP ರವಿ ಡಿ ಚನ್ನಣ್ಣನವರ್ IPS ಅವರು ಚಿತ್ರದುರ್ಗ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನಕ್ಕೆ ಭೇಟಿ.
ಯುವಜನತೆ ನಿರುದ್ಯೋಗದಿಂದ ಮುಕ್ತವಾಗಬೇಕಾದರೆ ಕೌಶಲ್ಯಾಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು ಎಂದು ಸಿ.ಐ.ಡಿ. ಎಸ್.ಪಿ. ರವಿ.ಡಿ.ಚನ್ನಣ್ಣನವರ್ ಯುವಕರಿಗೆ ಕರೆ ನೀಡಿದರು.
ನಗರದ ಶ್ರೀ ಜಗದ್ಗುರು ಮಹಾಸಂಸ್ಥಾನ ಭೋವಿಗುರುಪೀಠದ ಪೀಠಾಧ್ಯಾಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದರ್ಶನ ಪಡೆದು ಮಾತನಾಡಿದರು.
ವಿದ್ಯೆ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿರಬೇಕು, ಕೌಶಲ್ಯತೆಯನ್ನು ಯುವಕರು ಹೇಗೆ ಬಳಸಬೇಕು ಎಂಬುದನ್ನು ಅರಿತಾಗ ಮಾತ್ರ ಬದುಕಲ್ಲಿ ಯಶಸ್ವಿಯಾಗಲು ಸಾಧ್ಯ. ಕ್ರಿಯಾಶೀಲತೆಯಿಂದ ಸೃಜನಶೀಲತೆ ಹುಟ್ಟಿದಾಗ ಮಾತ್ರ ರಾಷ್ಟç ಅಭಿವೃದಿಯಾಗಲು ಸಾಧ್ಯ ಎಂದು ಹೇಳಿದರು.
ಯುವಕರಿಗೆ ಬದುಕಿನ ಭರವಸೆ ಮುಖ್ಯ, ಅವರು ಪರಾವಲಂಭಿಯಾಗಿರಬಾರದು, ಉದ್ಯೋಗದಲ್ಲಾಗಲೀ, ಬದುಕಿನಲ್ಲಾಗಲೀ, ಸ್ವಾವಲಂಭಿಯಾಗಿ ಬದುಕಬೇಕು. ರಾಷ್ಟçದ ಅಭಿವೃದ್ದಿಯೊಟ್ಟಿಗೆ ಸಮಾಜದ ಅಭಿವೃದ್ಧಿಯು ಸಹ ಮುಖ್ಯವಾಗಿರುತ್ತದೆ. ಹಾಗಾಗಿ ಯುವಕರ ಮೇಲಿನ ಬಹುದೊಡ್ಡ ಜವಾಬ್ದಾರಿಯನ್ನು ಅರಿತು ಬದುಕಿನ ಹೆಜ್ಜೆಗಳನ್ನು ಇಡಬೇಕು ಎಂದು ತಿಳಿಸಿದರು.
ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.