April 20, 2024

Chitradurga hoysala

Kannada news portal

“ದುರ್ಗಾಂಭಾಮೃತ ಎ2 ಮಿಲ್ಕ” ಹೆಸರಿನ ಹಾಲಿನ ಮಾರಾಟ ಕೇಂದ್ರ ಜುಲೈ.11 ಇಂದು ಪ್ರಾರಂಭ

ಚಿತ್ರದುರ್ಗ ಜು. 10
ಕೋಟೆನಾಡಿನ ಜನತೆಗೆ ಗೀರ್ ದೇಸಿ ಹಾಲು ಲಭ್ಯಕ್ಕೆ ಭರದ ಸಿದ್ದತೆ ನಡೆದಿದ್ದು, ಹಸುವಿನ ಶುದ್ಧ ಹಾಲು ಗೋಪಾಲಕರಿಂದ ನೇರವಾಗಿ ಗ್ರಾಹಕರಿಗೆ ಲಭ್ಯವಾಗಲಿದೆ

ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ನೇತೃತ್ವದ ತಂಡದಿಂದ ವಿನೂತನ ಪ್ರಯೋಗವಾಗಿದ್ದು, ಜಿಲ್ಲೆಯ 10 ಗೀರ್ ಹಸು ಸಾಕಾಣಿಕೆದಾರರಿಂದ ವಿನೂತನ ಪ್ರಯತ್ನ ಇದಾಗಿದೆ ಪೌಷ್ಟಿಕಯುಕ್ತ ಗೀರ್ ಹಸುವಿನ ಹಾಲು ಜಿಲ್ಲೆಯ ಇದೊಂದೇ ಹಾಲಿನ ಮಾರಾಟ ಕೇಂದ್ರದಲ್ಲಿ ಲಭ್ಯವಾಗಲಿದೆ

ನಗರದ ಜೆಸಿಆರ್ ಮುಖ್ಯ ರಸ್ತೆಯ ಸಾಯಿಬಾಬ ದೇವಸ್ಥಾನದ ಆವರಣದ “ದುರ್ಗಾಂಭಾಮೃತ ಎ2 ಮಿಲ್ಕ” ಹೆಸರಿನ ಹಾಲಿನ ಮಾರಾಟ ಕೇಂದ್ರ ಇದೇ ಜು.11 ರಂದು ಪ್ರಾರಂಭವಾಗಲಿದೆ. ಶಾಸಕರನ್ನು ಸೇರಿದಂತೆ ಜಿಲ್ಲೆಯ 10 ಜನ ಗೀರ್ ದೇಸಿ ಹಸು ಸಾಕಾಣಿಕೆದಾರರಿಂದ ವಿನೂತನ ಪ್ರಯೋಗ ಇದಾಗಲಿದ್ದು ಗೀರ್ ಹಾಲಿನ ಉತ್ಪನ್ನಗಳಾದ ತುಪ್ಪ, ಹಾಲು ಹಾಗೂ ಸಿಹಿ ತಿನಿಸುಗಳು ದೊರೆಯಲಿವೆ.

ಶುದ್ಧ ದೇಸೀ ತಳಿಯ ಹಸು, ಮತ್ತು ಎ2 ಹಾಲನ್ನ ಕೊಡುವುದರ ಜೊತೆಗೆ, ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಗೀರ್ ಹಸುಗಳ ಸಾಕಾಣಿಕೆ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಈ ಗೀರ್ ಹಸು ತಳಿಗಳ ಸಾಗಾಣಿಕೆ ಹೆಚ್ಚಿಸುವುದು ಹಾಗೂ ಪೌಷ್ಟಿಕ ಹಾಲನ್ನು ಜನರಿಗೆ ತಲುಪಿಸುವ ಸಲುವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಟಿ ರಘುಮೂರ್ತಿ ಹಾಗೂ ಅವರ ತಂಡ ವಿನೂತನ ಪ್ರಯೋಗಕ್ಕೆ ಕೈ ಜೋಡಿಸಿದ್ದು ಜನರಿಗೆ ಗೀರ್ ಹಸು ಹಾಲು ಹಾಗೂ ಅದರ ಉತ್ಪನ್ನಗಳು ಜನರಿಗೆ ಲಭ್ಯವಾಗಲಿದೆ.

About The Author

Leave a Reply

Your email address will not be published. Required fields are marked *