*ಮುಖ್ಯಮಂತ್ರಿ ಪದಕ ಪಡೆದ ಸಿ ಎನ್ ಕಾಂತರಾಜ್* (ಗೃಹರಕ್ಷಕದಳದ ಸೀನಿಯರ್ ಪ್ಲಟೂನ್ ಕಮಾಂಡರ್ ಗೆ ಮುಖ್ಯಮಂತ್ರಿ ಯಡಿಯೂರಪ್ಪ ಪದಕ ಪ್ರಧಾನ )
1 min read*ಮುಖ್ಯಮಂತ್ರಿ ಪದಕ ಪಡೆದ ಸಿ. ಎನ್.ಕಾಂತರಾಜ್*
( ಚಿತ್ರದುರ್ಗದ ಗೃಹರಕ್ಷಕದಳದ ಸೀನಿಯರ್ ಪ್ಲಟೂನ್ ಕಮಾಂಡರ್ ಗೆ ಮುಖ್ಯಮಂತ್ರಿ ಯಡಿಯೂರಪ್ಪ ಪದಕ ಪ್ರಧಾನ )
ಬೆಂಗಳೂರು : ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು,ಗೃಹರಕ್ಷಕ ದಳ, ರಕ್ಷಣೆ ಹಾಗೂ ರಾಜ್ಯ ವಿಪತ್ತು, ಸ್ವಂದನ ಪಡೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಮುಖ್ಯಮಂತ್ರಿಗಳ ಪದಕ ಪ್ರಧಾನ ಸಮಾರಂಭ ಮಂಗಳವಾರ ನಡೆಯಿತು, ಸದರಿ ಸಮಾರಂಭದಲ್ಲಿ ಚಿತ್ರದುರ್ಗ ಗೃಹರಕ್ಷಕದಳದ ಸೀನಿಯರ್ ಪ್ಲಟೂನ್ ಕಮಾಂಡರ್ ಸಿ.ಎನ್. ಕಾಂತರಾಜ್ ಇವರು ಕಾಯಕವೇ ಕೈಲಾಸ ಎಂದು ತಿಳಿದು ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಕವಾಯತುಗಳಿಗೆ ಮುಂಚೂಣಿಯಲ್ಲಿ ಹಾಜರಿದ್ದು, ಸಾರ್ವಜನಿಕ ಚಟುವಟಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಸರ್ಕಾರ ಹಾಗು ನಾಗರಿಕ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.ಮತ್ತು ಗೃಹರಕ್ಷಕರಿಗೆ ಘಟಕದಲ್ಲಿ ಉತ್ತಮ ತರಬೇತಿಯನ್ನು ನೀಡುತ್ತಿದ್ದಾರೆ ಹಾಗೂ ಎಲ್ಲಾ ಬಂದೋಬಸ್ತ್ ಕರ್ತವ್ಯಗಳಿಗೆ ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಗೃಹ ರಕ್ಷಕ ಮೇಲ್ವಿಚಾರಣೆ ಮಾಡುವುದರ ಜೊತೆಯಲ್ಲಿ ಗೃಹರಕ್ಷಕ ದಳದ ಎಲ್ಲಾ ಚಟುವಟಿಕೆಗಳಲ್ಲಿ ಕಾಂತರಾಜ್ ರವರು ಸಕ್ರಿಯವಾಗಿ ಭಾಗವಹಿಸಿ ಕೆಲಸವನ್ನು ನಿರ್ವಹಿಸಿರುತ್ತಾರೆ. ಹಾಲಿ ಸೀನಿಯರ್ ಪ್ಲಟೂನ್ ಕಮಾಂಡರ್ ಮತ್ತು ಪ್ರಭಾರ ಘಟಕಾಧಿಕಾರಿ ಗಳಾಗಿ ಉತ್ತಮ ಸೇವೆ ನಿರ್ವಹಿಸುತ್ತಿದ್ದು ಹಿರಿಯ ಅಧಿಕಾರಿಗಳಿಗೆ ಹಾಗೂ ಸಮಾಜದಲ್ಲಿನ ಜನರ ಪ್ರೀತಿ ಗಳಿಸಿರುತ್ತಾರೆ ಇವೆಲ್ಲಾ ಸೇವೆಯನ್ನು ಗಮನಿಸಿದ ಸರ್ಕಾರ ಮಂಗಳವಾರ ನಡೆದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ನವರು ಸಿ. ಎನ್ ಕಾಂತರಾಜ್ ಇವರಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ನೀಡಿ ಗೌರವಿಸಿದ್ದಾರೆ.