April 25, 2024

Chitradurga hoysala

Kannada news portal

*ಸಿದ್ದರಾಮಯ್ಯ ಹಿಂದುಳಿದ ಸಮಾಜದ ದೊಡ್ಡ ನಾಯಕ : ಶ್ರೀರಾಮುಲು*

1 min read

*ಸಿದ್ದರಾಮಯ್ಯ ಹಿಂದುಳಿದ ಸಮಾಜದ ದೊಡ್ಡ ನಾಯಕ : ಶ್ರೀರಾಮುಲು*

ಚಿತ್ರದುರ್ಗ: ಸಿದ್ದರಾಮಯ್ಯ ಅವರು ಕೂಡ ದೊಡ್ಡನಾಯಕರಿದ್ದಾರೆ. ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದವರು ಎಂದು ಬಾದಾಮಿಯಲ್ಲಿ ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ. ಬಾದಾಮಿ ಕ್ಷೇತ್ರದಿಂದ ಮತ್ತೆ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧೆ ಮಾಡಲಿ, ಆದರೆ ನಾನು ಸ್ಪರ್ಧೆ ಮಾಡುವ ವಿಚಾರ ಆಯಾ ಸಂದರ್ಭದಲ್ಲಿ ನಮ್ಮ ಪಕ್ಷ ನಿರ್ಧರಿಸಲಿದೆ ಎಂದಿದ್ದಾರೆ.
ಸಾಮಾನ್ಯವಾಗಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಸಿಎಂ ಅಭ್ಯರ್ಥಿಗಳು. ಅಥವಾ ನೆಹರು ಕುಟುಂಬದವರು, ಇಲ್ಲ ದೊಡ್ಡ ದೊಡ್ಡ ವ್ಯಕ್ತಿಗಳು.ಆದರೆ ಬಿಜೆಪಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಈ ಅವಕಾಶ ನೀಡಿತು, ಬಾದಾಮಿಯ ಜನತೆ ಕಡಿಮೆ ಅಂತರದಲ್ಲಿ ನನ್ನನ್ನು ಸೋಲಿಸಿದರು. ಸಿದ್ದರಾಮಯ್ಯ ಅವರ ನಸೀಬು ಚೆನ್ನಾಗಿತ್ತು ಬಾದಾಮಿಯಲ್ಲಿ ಗೆದ್ದರು ಎಂದಿದ್ದಾರೆ.
ನಾವೆಲ್ಲಾ ಹಿಂದುಳಿದ ಸಮಾಜದಿಂದ ಬಂದವರು, ಮಾಜಿ ಸಿಎಂ ಸಿದ್ದರಾಮಯ್ಯ ಹಿಂದುಳಿದ ಸಮಾಜದ ದೊಡ್ಡ ನಾಯಕರು. ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವಂತಹ ವ್ಯಕ್ತಿ. ಅಂಥವರಿಗೆ ಗೌರವ ಕೊಡುವುದು ನಮ್ಮ ಸಂಪ್ರದಾಯ. ನಾನು ಅವರನ್ನು ಗೌರವಿಸುತ್ತೇನೆ. ರಾಜಕಾರಣದ ಸಮಯದಲ್ಲಿ ವಿರೋಧಿಸುತ್ತೇನೆ, ರಾಜಕಾರಣದಲ್ಲಿ ನಮ್ಮ ಪಕ್ಷ ಸಿದ್ಧಾಂತ ಅವರ ಪಕ್ಷ ಸಿದ್ಧಾಂತ ಬೇರೆ ಬೇರೆ. ಅವರ ವ್ಯಕ್ತಿತ್ವ ಮತ್ತು ಹಿಂದುಳಿದ ಸಮಾಜದ ವಿಚಾರದಲ್ಲಿ ಅವರಿಗೆ ಗೌರವ ನೀಡುತ್ತೇವೆ ಎಂದರು.

About The Author

Leave a Reply

Your email address will not be published. Required fields are marked *