April 24, 2024

Chitradurga hoysala

Kannada news portal

*ಜೀವಿತಾವಧಿ ದಾಖಲೆ ಸಲ್ಲಿಸಲು ಸೂಚನೆ*

1 min read

*ಜೀವಿತಾವಧಿ ದಾಖಲೆ ಸಲ್ಲಿಸಲು ಸೂಚನೆ*

(ಮಾಸಾಶನ ಪಡೆಯುತ್ತಿರುವ ಕಲಾವಿದರು, ಸಾಹಿತಿಗಳು)

ಚಿತ್ರದುರ್ಗ:
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಾಸಾಶನ ಪಡೆಯುತ್ತಿರುವ ಜಿಲ್ಲೆಯ ಕಲಾವಿದರು, ಸಾಹಿತಿಗಳು ಹಾಗೂ ವಿಧವಾ ಮಾಸಾಶನ ಪಡೆಯುತ್ತಿರುವವರು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಬೇಕಾಗಿದೆ.
ಮಾಸಾಶನ ಪಡೆಯುತ್ತಿರುವವರು ತಮ್ಮ ಆಧಾರ ಕಾರ್ಡ್, ಪಿಂಚಣಿ ಪುಸ್ತಕದ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ದಾಖಲೆಗಳ ಮೂಲ ಪ್ರತಿಗಳೊಂದಿಗೆ ಖುದ್ದಾಗಿ ಜಿಲ್ಲಾ ಕಚೇರಿಗೆ ಆಗಮಿಸಿ ಜೀವಿತಾವಧಿ ಪ್ರಮಾಣ ಪತ್ರದ ಪ್ರತಿಯನ್ನು ಪಡೆದು ಭರ್ತಿ ಮಾಡಿ ಹಾಗೂ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಂದ ಸಹಿ ಮಾಡಿಸಿ ಜುಲೈ 26ರಂದು ಸಂಜೆ 5.30 ರೊಳಗೆ ದಾಖಲೆ ಸಲ್ಲಿಸಲು ತಿಳಿಸಲಾಗಿದೆ.
ಅರ್ಜಿ ನಮೂನೆಯನ್ನು ಜಿಲ್ಲಾ ಕಚೇರಿಯಿಂದ ಪಡೆಯಬಹುದು ಅಥವಾ ಚಿತ್ರದುರ್ಗ ವಾರ್ತೆ (chitradurga varthe) ಟೆಲಿಗ್ರಾಂ ಲಿಂಕ್ ಬಳಸಿ ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು ನಂತರ ತಾವು ಮಾಸಾಶನ ಪಡೆಯುತ್ತಿರುವ ಬ್ಯಾಂಕ್ ಮ್ಯಾನೇಜರ್ ಸಹಿ ಪಡೆದು ನಿಗಧಿತ ದಾಖಲೆಗಳೊಂದಿಗೆ ಈ ಕಚೇರಿಗೆ ಸಲ್ಲಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ ತಿಳಿಸಿದ್ದಾರೆ.
===

About The Author

Leave a Reply

Your email address will not be published. Required fields are marked *