April 20, 2024

Chitradurga hoysala

Kannada news portal

*ಡಿಕೆ ಶಿವಕುಮಾರ್ ಗೆ ಮುತ್ತಿಗೆ* (ಸದಾಶಿವ ವಿಚಾರವಾಗಿ ಡಿಕೆಶಿ ವಿರುದ್ಧ ಗರಂ ಆದ ಮಾದಿಗ ಸಮುದಾಯ ಮುಖಂಡರು)

1 min read

*ಡಿಕೆ ಶಿವಕುಮಾರ್ ಗೆ ಮುತ್ತಿಗೆ* (ಸದಾಶಿವ ವಿಚಾರವಾಗಿ ಡಿಕೆಶಿ ವಿರುದ್ಧ ಗರಂ ಆದ ಮಾದಿಗ ಸಮುದಾಯ ಮುಖಂಡರು)

ಕಲ್ಬುರ್ಗಿ: ಮಾದಿಗ ಸಮುದಾಯದ ಹಲವು ವರ್ಷಗಳ ಬೇಡಿಕೆಯಾದ ಸದಾಶಿವ ಆಯೋಗದ ವರದಿ ಜಾರಿಗೆ ತರುವುದಕ್ಕೆ ಸಿದ್ದರಾಮಯ್ಯ ನೇತೃತ್ವದ ನಿಮ್ಮ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರಲಿಲ್ಲ ತಾವು ಸಹ ಸದಾಶಿವ ಆಯೋಗದ ವರದಿಗೆ ಏಕೆ ವಿರೋಧ ವ್ಯಕ್ತಪಡಿಸುತ್ತಿರ ಎಂದು ಡಿಕೆಶಿಯವರನ್ನು ಕಲ್ಬುರ್ಗಿಯಲ್ಲಿ ಪ್ರಶ್ನಿಸಿದ ಮಾದಿಗ ಸಮಾಜದ ಮುಖಂಡರು ಕೆಪಿಸಿಸಿ ರಾಜ್ಯ ಘಟಕದ ಘಟಕದ ಅಧ್ಯಕ್ಷರಿಗೆ ಮಾದಿಗ ಸಂಘಟನೆಗಳ ಒಕ್ಕೂಟದ ಸದಸ್ಯರುಗಳು ಕಲ್ಬುರ್ಗಿಯಲ್ಲಿ ಶನಿವಾರ ಮುತ್ತಿಗೆಯನ್ನು ಹಾಕಿದರಲ್ಲದೆ , ಡಿಕೆಶಿ ವಿರುದ್ಧ ಘೋಷಣೆಯನ್ನು ಸಹ ಕೂಗಿ ಪ್ರತಿಭಟಿಸಿದರು . ನೀವು ಎಲ್ಲಿಯವರೆಗೆ ಮಾದಿಗ ಸಮುದಾಯವನ್ನು ಕಡೆಗಣಿಸುತ್ತಿರೋ ಅಲ್ಲಿಯವರೆಗೂ ಕಾಂಗ್ರೆಸ್ ಪಕ್ಷ ಹಿನ್ನಡೆ ಖಚಿತ ಎಂದರಲ್ಲದೆ , ಇನ್ನೂ ಮುಂದಾದರೂ ಎಚ್ಚೆತ್ತುಕೊಂಡು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮಾದಿಗ ಸಮುದಾಯಕ್ಕೆ ನಿಮ್ಮ ಪಕ್ಷದಿಂದ ಹೆಚ್ಚಿನ ಟಿಕೆಟ್ ನೀಡಬೇಕು ಇಲ್ಲವಾದರೆ ಈ ಸಮುದಾಯ ಕಾಂಗ್ರೆಸ್ ತೊರೆಯುವುದು ಅನಿವಾರ್ಯವಾಗುತ್ತದೆ ಎಂದ ಪ್ರತಿಭಟನಾಕಾರರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಾಣಲು ಕಾರಣ ಮಾದಿಗರನ್ನು ಸಮುದಾಯವನ್ನು ಕಡೆಗಣಿಸಿ ಲಂಬಾಣಿ ಸಮುದಾಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದೇ ಆಗಿದ್ದು ,ಮುಂದಿನ ದಿನಗಳಲ್ಲಿ ಆದರೂ ಸರಿಯಾದ ಕ್ರಮದಲ್ಲಿ ನಿಮ್ಮ ಪಕ್ಷ ಸಾಗಲಿ ಎಂದು ಒತ್ತಾಯಿಸಿದರು .

ಮುಖಂಡರು ಅಹವಾಲು ಸ್ವೀಕರಿಸಿದ ಡಿಕೆ ಶಿವಕುಮಾರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಭಾವಚಿತ್ರವಿರುವ ಪೋಸ್ಟ್ಗಳನ್ನು ಎತ್ತಿಹಿಡಿದು ಬೇಡಿಕೆಗಳನ್ನು ಈಡೇರಿಸಲು ನ್ಯಾಯವಾಗಿ ಪ್ರಯತ್ನಿಸುವುದಾಗಿ ಭರವಸೆ ಭರವಸೆ ನೀಡಿದರು ಎನ್ನುಲಾಗಿದೆ.

About The Author

Leave a Reply

Your email address will not be published. Required fields are marked *