ಬಾಲಸ್ವಾಮಿ ದೇಶಪ್ಪ ಇನ್ನಿಲ್ಲ :ನಿವೃತ್ತ ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ
1 min read*ಬಾಲಸ್ವಾಮಿ ದೇಶಪ್ಪ ಇನ್ನಿಲ್ಲ*
ಚಿತ್ರದುರ್ಗ:
ನಗರಸಭೆಯ 32 ನೇ ವಾರ್ಡ್ ಸದಸ್ಯೆ ತಾರಕೇಶ್ವರಿಯವರ ಪತಿ, ನಿವೃತ್ತ ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಬಾಲಸ್ವಾಮಿ (62) ಅವರು ಬುಧವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಎರಡು ಕಿಡ್ನಿ ವೈಫಲ್ಯದ ಜೊತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಸ್ವಾಮಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತರಿಗೆ ನಗರಸಭೆ ಸದಸ್ಯ ತಾರಕೇಶ್ವರಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜೈಹಿಂದ್ ಹೋಟೆಲ್ ಎದುರಿನ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.