ಹಿಂದುಳಿದ ವರ್ಗಗಳ ವಿವಿಧ ಬ್ಲಾಕ್ ಗೆ ನೇಮಕಗೊಂಡ ಅಧ್ಯಕ್ಷರುಗಳಿಗೆ ಆದೇಶಪತ್ರ ನೀಡಿದ ಜಿಲ್ಲಾಅಧ್ಯಕ್ಷ ಎನ್.ಡಿ.ಕುಮಾರ್
1 min readಹಿಂದುಳಿದ ವರ್ಗಗಳ ವಿವಿಧ ಬ್ಲಾಕ್ ಗೆ ನೇಮಕಗೊಂಡ ಅಧ್ಯಕ್ಷರುಗಳಿಗೆ ಆದೇಶಪತ್ರ ನೀಡಿದ ಜಿಲ್ಲಾಅಧ್ಯಕ್ಷ ಎನ್.ಡಿ.ಕುಮಾರ್
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನೇಡೆದ ಕಾರ್ಯಕ್ರಮದಲ್ಲಿ ಪರಶುರಾಮ ಪುರ ಬ್ಲಾಕ್ ಹಾಗೂ ಹಿರಿಯೂರು ನಗರ ಬ್ಲಾಕ್ ಮತ್ತು ಹಿರಿಯೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷರುಗಳ ಆಯ್ಕೆ ಮಾಡಲಾಯಿತು.
ಪರಶುರಾಂಪುರ ಬ್ಲಾಕ್ ಅಧ್ಯಕ್ಷರಾಗಿ ಜೆ ಎನ್ ವೀರೇಶ್ ಕುಮಾರ್, ನಗರ ಬ್ಲಾಕ್ ಅಧ್ಯಕ್ಷರಾಗಿ ರಾಘವೇಂದ್ರ (ತರಕಾರಿ ರಘು) ಹಿರಿಯೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾಗಿ ಸಿದ್ದೇಶ್ ಇವರುಗಳನ್ನು ರಾಜ್ಯ ಅಧ್ಯಕ್ಷ ಎಂ ಡಿ ಲಕ್ಷ್ಮಿನಾರಾಯಣ್ ಇವರ ಆದೇಶದ ಮೇರೆಗೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ರಾದ ಎನ್. ಡಿ. ಕುಮಾರ್ ಅವರು ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಗೀತಾನಂದಿನಿಗೌಡ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆಂಜಿನಪ್ಪ ಇಂಟೆಕ್ ಅಧ್ಯಕ್ಷ ಅಶೋಕ್ ನಾಯ್ಡು ಕಾರ್ಮಿಕ ವಿಭಾಗದ ಸೈಯದ್ ಮೊಯ್ದಿನ್ ಚೋಟು ಪದವೀಧರ ಹಾಗೂ ಶಿಕ್ಷಣ ವಿಭಾಗದ ಅಧ್ಯಕ್ಷ ಮುದಸ್ಸಿರ್ ಇನ್ನುಳಿದ ಮುಖಂಡರಾದ ಪಾರ್ಥಾ ಹಾಗೂ ಉಮೇಶ್ ಹಾಜರಿದ್ದರು.