April 19, 2024

Chitradurga hoysala

Kannada news portal

ಸಮುದಾಯದ ಕನಿಷ್ಟ ಇಬ್ಬರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡಬೇಕೆಂದು ಮುಸ್ಲಿಂ ಮುಖಂಡ ಖುದ್ದೂಸ್ ನೂತನ ಮುಖ್ಯಮಂತ್ರಿ ಗೆ ಆಗ್ರಹ.

1 min read

ನೂತನವಾಗಿ ರಚಿಸಲಾದ ರಾಜ್ಯ ಸರ್ಕಾರದಲ್ಲಿ ಮುಸ್ಲಿಂರನ್ನು ಕಡೆಗಣಿಸಿದ್ದು. ಸಮುದಾಯದ ಕನಿಷ್ಟ ಇಬ್ಬರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡಬೇಕೆಂದು ಮುಸ್ಲಿಂ ಮುಖಂಡ ಖುದ್ದೂಸ್ ನೂತನ ಮುಖ್ಯಮಂತ್ರಿ ಗೆ ಆಗ್ರಹ.

ದಲಿತ ಸಮುದಾಯದ ನಂತರ ರಾಜ್ಯದ ಅತೀ ದೊಡ್ಡ ಸಮುದಾಯವಾದ ಮುಸ್ಲಿಮರಿಗೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರಕಾರದಲ್ಲಿ ಮಣೆ ಹಾಕದೇ ಇದ್ದದ್ದು ಆ ಸಮುದಾಯ ದೊಂದಿಗೆ ತೋರಿದ ಘೋರ ಅನ್ಯಾಯವಾಗಿತ್ತು. ಇದು ಸಾಮಾಜಿಕ ನ್ಯಾಯ ಪಾಲನೆಯ ನಿಟ್ಟಿನಲ್ಲಿ ಎಸಗಿದ ದ್ರೋಹವೂ ಆಗಿದೆ. ಆದ್ದರಿಂದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಮ್ಮ ಸಚಿವ ಸಂಪುಟದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಟ ಇಬ್ಬರಿಗೆ ಸಚಿವರನ್ನಾಗಿ ಮಾಡಬೇಕು. ದಲಿತ.ಸಮುದಾಯಗಿಂತಲೂ ಶೋಚನೀಯ ಸ್ಥಿತಿಯಲ್ಲಿರುವ ಮುಸ್ಲಿಮರನ್ನು ದೇಶದ ಮುಖ್ಯವಾಹಿನಿಯಲ್ಲಿ ತೊಡಗಿಸಿ ಕೊಳ್ಳಲು ಅನುವು ಮಾಡಿ ಕೊಡಬೇಕಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಮುಸ್ಲಿಂ ಸಮುದಾಯದ ಮುಖಂಡರು. ಜಿಲ್ಲಾ ಕಾಂಗ್ರೆಸ್ ಯುವ ಮುಖಂಡರು ಆದ ಸೈಯದ್ ಖುದ್ದೂಸ್ ಪತ್ರಿಕೆ ಯ ಮೂಲಕ ಆಗ್ರಹಿಸಿದ್ದಾರೆ…

About The Author

Leave a Reply

Your email address will not be published. Required fields are marked *