April 16, 2024

Chitradurga hoysala

Kannada news portal

ಉಪನ್ಯಾಸಕ, ಡಾ.ಚಿತ್ರಲಿಂಗಸ್ವಾಮಿ ಇನ್ನಿಲ್ಲ,

ಚಿತ್ರದುರ್ಗ:

ಉಪನ್ಯಾಸಕ, ಬಂಗಾರಕ್ಕನಹಳ್ಳಿಯ ಡಾ.ಚಿತ್ರಲಿಂಗಸ್ವಾಮಿ(೫೩) ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಆರೋಗ್ಯದ ಸಮಸ್ಯೆಯಿಂದ ನರಳುತ್ತಿದ್ದ ಚಿತ್ರಲಿಂಗಸ್ವಾಮಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಇಬ್ಬರು ಮಕ್ಕಳು, ಪತ್ನಿ ಸೇರಿದಂತೆ ಅಪಾರ ಸ್ನೇಹಿತರು, ಶಿಷ್ಯ ವರ್ಗ, ಬಂಧು ಮಿತ್ರರನ್ನು ಅಗಲಿದ್ದಾರೆ.

ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಸೋಮವಾರ೨೩-೮-೨೦೨೧ರ ಸಂಜೆ 6ಕ್ಕೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ನಾಳೆ ಆ.24ರ ಮಂಗಳವಾರ ಸ್ವಗ್ರಾಮ ಬಂಗಾರಕ್ಕನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು (ಸಹೋದರ ರಾಮು ಸಬ್ ರಿಜಿಸ್ಟರ್ ಕಛೇರಿ ಯ ಗುಮಾಸ್ತ ರು) ತಿಳಿಸಿವೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ೩೦ ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದು ಡಾ.ಚಿತ್ರಲಿಂಗ ಸ್ವಾಮಿ ಎಂ. ಇವರು ಇಂಗ್ಲೀಷ್ ಉಪನ್ಯಾಸಕರು ಸೇವೆ ಮಾಡುತ್ತಿದ್ದರು. ಇತ್ತೀಚೆಗೆ ಇವರಿಗೆ ಡಾಕ್ಟರೇಟ್ ಪದವಿಯು ಲಭ್ಯವಾಗಿತ್ತು.

ಡಾ. ಚಿತ್ರಲಿಂಗಸ್ವಾಮಿ ಇವರು ಚಿತ್ರದುರ್ಗ ತಾಲ್ಲೂಕಿನ ಬಂಗಾರಕ್ಕನ ಹಳ್ಳಿಯವರು. ಶ್ರೀಯುತರು ವಿದ್ಯಾರ್ಥಿ ದಿನಗಳಿಂದಲೂ ದಲಿತ ಸಂಘರ್ಷ ಸಮಿತಿಯ ಸಕ್ರೀಯ ಕಾರ್ಯಕರ್ತರಾಗಿ ಜಿಲ್ಲೆಯ ಪ್ರತಿ ಹೋರಾಟಗಳಲ್ಲಿ ಭಾಗಿಯಾಗಿದವರು. ಮಾನವೀಯ ನಡವಳಿಕೆ, ನೇರ ನಡೆ ಮತ್ತು ನುಡಿ ಇವರಲ್ಲಿನ ವಿಶೇಷ ಗುಣವಾಗಿತ್ತು. ಮೃತರು ಈಚೆಗೆ ಆಂಗ್ಲ ಭಾಷೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದರು. ಹಾಗೆಯೇ, ಇವರು ಜಿಲ್ಲೆಯ ಅನುದಾನಿತ ಕಾಲೇಜಿನ ಉಪನ್ಯಾಸಕರಿದ್ದರು. ಇವರ ಅಗಲಿಕೆಯು ಸಮುದಾಯಕ್ಕೆ ತುಂಬಾ ನೋವುಂಟು ತಂದಿದೆ

About The Author

Leave a Reply

Your email address will not be published. Required fields are marked *