April 25, 2024

Chitradurga hoysala

Kannada news portal

ಇಂದು (ಆಗಸ್ಟ್ 28ರಂದು) ಪಶುಸಂಗೋಪನೆ ಸಚಿವರ ಜಿಲ್ಲಾ ಪ್ರವಾಸ

1 min read

ಇಂದು (ಆಗಸ್ಟ್ 28ರಂದು) ಪಶುಸಂಗೋಪನೆ ಸಚಿವರ ಜಿಲ್ಲಾ ಪ್ರವಾಸ

ಚಿತ್ರದುರ್ಗ,ಆಗಸ್ಟ್27:
ಪಶುಸಂಗೋಪನೆ ಸಚಿವರಾದ ಪ್ರಭು ಬಿ. ಚವ್ಹಾಣ್ ಅವರು ಆಗಸ್ಟ್ 28ರಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಚಿವರು ಆಗಸ್ಟ್ 28ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಆಗಮಿಸಿ, ಬೆಳಿಗ್ಗೆ 10.30ರಿಂದ 11 ರವರೆಗೆ ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡುವರು. ಬೆಳಿಗ್ಗೆ 11.00 ರಿಂದ 12.00 ಗಂಟೆವರೆಗೆ ಚಿತ್ರದುರ್ಗ ತಾಲ್ಲೂಕಿನ ಕಾತ್ರಾಳ ಕೆರೆ ಹತ್ತಿರವಿರುವ ಶ್ರೀಆದಿಚುಂಚನಗಿರಿ ಗೋಶಾಲೆಗೆ ಭೇಟಿ ನೀಡುವರು. ಸಚಿವರು ಅದೇ ದಿನ ಮಧ್ಯಾಹ್ನ 01 ಗಂಟೆಗೆ ಚಿತ್ರದುರ್ಗದಿಂದ ಹಾವೇರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *