April 25, 2024

Chitradurga hoysala

Kannada news portal

ಲೋಲಾಕ್ಷಮ್ಮ–ಮಹೇಶೆಗೆ ಗೌರವ ಡಾಕ್ಟರೇಟ್: ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ ಮಂಜುನಾಥ್

1 min read

ಲೋಲಾಕ್ಷಮ್ಮ–ಮಹೇಶೆಗೆ ಗೌರವ ಡಾಕ್ಟರೇಟ್:

ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ ಮಂಜುನಾಥ್

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿತ್ರದುರ್ಗ ತಾಲ್ಲೂಕು ಶಾಖೆಯ ಅಧ್ಯಕ್ಷರು ಹಾಗೂ ದಂಡಿನ ಕುರುಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ. ಟಿ. ಲೋಲಾಕ್ಷಮ್ಮ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀ ಚತುರ್ವೇದಿ ತಿವಾರಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ *” ದಿ ಪೊಲಿಟಿಕಲ್ ರೋಲ್ ಆಪ್ ವುಮೆನ್ ಇನ್ ಚಿತ್ರದುರ್ಗ ಪಂಚಾಯತ್ “* ಎಂಬ ವಿಷಯದ ಸಂಶೋಧನಾ ಮಹಾಪ್ರಬಂದಕ್ಕೆ ಕಾನ್ಪುರ ವಿಶ್ವವಿದ್ಯಾನಿಲಯವು ಪಿಎಚ್ ಡಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ವೃತ್ತಿಯಲ್ಲಿ ಶಿಕ್ಷಕಿಯಾಗಿ, ನೌಕರರ ಸಮುದಾಯದಲ್ಲಿಯೇ ಅತಿ ದೊಡ್ಡ ಸಮುದಾಯವಾದ ಶಿಕ್ಷಕ ಸಂಘಟನೆಯ ಅಧ್ಯಕ್ಷೆಯಾಗಿ, ಸಂಸಾರದಲ್ಲಿ ಗೃಹಿಣಿಯಾಗಿ, ಮಕ್ಕಳಿಗೆ ತಾಯಿಯಾಗಿ, ಸಂಸಾರದಲ್ಲಿಯೂ ಯಶಸ್ವಿಯಾಗಿ ಗೌರವ ಡಾಕ್ಟರೇಟ್ ಪಡೆದ ಲೋಲಕ್ಷ್ಮಮ್ಮ ಬಿ.ಟಿ. ಹಾಗೂ

ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಕೆ.ಎನ್.ಮಹೇಶ್ ಮಂಡಿಸಿರುವ *”ಎ ಸ್ಟಡಿ ಆಪ್ ದಿ ವೀಡ್ ಫ್ಲೋರ ಆಫ್ ಸಮ್ ಕಲ್ಟಿವೇಟೆಡ್ ಫೀಲ್ಡ್ ಆಫ್ ಕರ್ನಾಟಕ ಸ್ಟೇಟ್”* ಎಂಬ ವಿಷಯದ ಸಂಶೋಧನಾ ಮಹಾಪ್ರಭಂದಕ್ಕೆ ಕಾನ್ಪುರ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಚಿತ್ರದುರ್ಗದ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ ಮಂಜುನಾಥ್ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *