April 19, 2024

Chitradurga hoysala

Kannada news portal

ಕೋವಿಡ್ ಲಸಿಕಾ ಆಭಿಯಾನ ಕಾರ್ಯಕ್ರಮದಲ್ಲಿ ಟಿಹೆಚ್‍ಒ ಡಾ.ಬಿ.ವಿ ಗಿರೀಶ್. ಕೋವಿಡ್-19 ಸಂಭಾವ್ಯ ಮೂರನೇ ಅಲೆ ಸಂಭವಿಸುವ ಮೊದಲು ಎಲ್ಲರೂ ಲಸಿಕೆ ಪಡೆಯಿರಿ

1 min read

ಕೋವಿಡ್ ಲಸಿಕಾ ಆಭಿಯಾನ ಕಾರ್ಯಕ್ರಮದಲ್ಲಿ ಟಿಹೆಚ್‍ಒ ಡಾ.ಬಿ.ವಿ ಗಿರೀಶ್. ಕೋವಿಡ್-19 ಸಂಭಾವ್ಯ ಮೂರನೇ ಅಲೆ ಸಂಭವಿಸುವ ಮೊದಲು ಎಲ್ಲರೂ ಲಸಿಕೆ ಪಡೆಯಿರಿ
______________________

ಚಿತ್ರದುರ್ಗ: ಸೆಪ್ಟೆಂಬರ್03:
ಕೋವಿಡ್ ಲಸಿಕೆಯೂ ಸುರಕ್ಷಿತವಾಗಿದ್ದು ಹೆಚ್ಚಿನ ಅಡ್ಡ ಪರಿಣಾಮವಿರುವುದಿಲ್ಲ. ಕೋವಿಡ್-19 ಸಂಭಾವ್ಯ ಮೂರನೇ ಅಲೆ ಸಂಭವಿಸುವ ಮೊದಲು ಎಲ್ಲರೂ ಲಸಿಕೆ ಪಡೆಯಿರಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಂಗಾರಕ್ಕನಹಳ್ಳಿಯಲ್ಲಿ ಶುಕ್ರವಾರ ನಡೆದ ಕೋವಿಡ್ ಲಸಿಕಾ ಆಭಿಯಾನ ಕಾರ್ಯಕ್ರಮದಲ್ಲಿ ಲಸಿಕಾ ನಿರಾಕರಣೆ ಇರುವ ಗ್ರಾಮಗಳ ಭೇಟಿಮಾಡಿ ಸಮುದಾಯದ ಮುಖಂಡರು ಮತ್ತು ಗ್ರಾಮ ನಿಘಾವಣ ತಂಡದ ಸದಸ್ಯರಿಗೆ ಮಾಹಿತಿ ಶಿಕ್ಷಣ ಸಂವಹನ ನಡೆಸಿ ಅವರು ಮಾತನಾಡಿದರು.
ಲಸಿಕೆ ಪಡೆಯುವುದರಿಂದ ಕೋವಿಡ್ ಸಂಭವಿಸುವ ಮರಣ ತಪ್ಪಿಸಲು ಇದೊಂದು ಸುಲಭ ಮಾರ್ಗ ಎಂದು ತಿಳಿಸಿದ ಅವರು ಮನೆ ಮನೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಅಂತರ್ ವೈಯಕ್ತಿಕ ಸಮಾಲೋಚನೆ ನಡೆಸಿದರು.
ಕಾರ್ಯಕ್ರಮದಲ್ಲಿ 100 ಜನ ಫಲಾನುಭವಿಗಳಿಗೆ ಲಸಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ಆರೋಗ್ಯ ಸುರಕ್ಷಾಧಿಕಾರಿ ಪರವಿನ್, ತಾಲ್ಲೂಕು ಆಶಾ ಬೋಧಕಿ ಪದ್ಮಜಾ, ಕಿರಿಯ ಆರೋಗ್ಯ ಸುರಕ್ಷಾಧಿಕಾರಿ ನಾಗವೇಣಿ, ಸಮುದಾಯ ಆರೋಗ್ಯಾಧಿಕಾರಿ ಮಾಂತಾ ರಾಥೋಡ್, ಪಿಡಿಒ ಮತ್ತು ಗ್ರಾಮ ನಿಘಾವಣಾ ತಂಡದ ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *