ಕಾಂಗ್ರೆಸ್ ನ ಮಾಜಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಶಿವು ಯಾದವ್ ಗೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಸನ್ಮಾನಿಸಲಾಯಿತು.
1 min readಕಾಂಗ್ರೆಸ್ ನ ಜಿಲ್ಲಾ ಮಾಜಿ ಕಾರ್ಯಾಧ್ಯಕ್ಷರಾದ ಶಿವು ಯಾದವ್ ಗೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಸನ್ಮಾನಿಸಲಾಯಿತು.
ದಿನಾಂಕ 3-9 -2021 ರಂದು ಶಿರಾ ತಾಲೂಕಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿಕೊಟ್ಟ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷರಾದ ಹಾಗೂ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಚುನಾಯಿತ ಅಧ್ಯಕ್ಷರಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಚಿತ್ರದುರ್ಗ ಜಿಲ್ಲಾ ಮಾಜಿ ಕಾರ್ಯಾಧ್ಯಕ್ಷರಾದ ಶಿವು ಯಾದವ್ ಸಿ ಇವರಿಗೆ ಸಿರಾ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಮೈಸೂರು ಪೇಟ ತೊಡಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು
ನಂತರ ತಾಲ್ಲೂಕಿನ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷರಾದ ನಾಗೇಂದ್ರಪ್ಪ ಮಾತನಾಡಿ ವಿ ನಾಗಪ್ಪನವರ ನಂತರ ಅವರು ನಡೆದ ದಾರಿಯಲ್ಲೇಯೇ ಕಾಡುಗೊಲ್ಲರ ಸಂಘವನ್ನು ದೈರ್ಯ ಮತ್ತು ಪ್ರಾಮಾಣಿಕತೆಯಿಂದ ಹಾಗೂ ನೇರಾ ಮತ್ತು ನಿಷ್ಟೂರತೆಯಿಂದ ಸಂಘಟಿಸುತ್ತಿರುವು ಸಂತೊಷದಾಯಕ ವಿಷಯವಾಗಿದೆ ಕಾಡುಗೊಲ್ಲರ ಬಹಳಷ್ಟು ಸಮಸ್ಯೆಗಳಿಗೆ ನಿಮ್ಮಿಂದ ನಿಮ್ಮ ಸಂಘಟಿತ ಹೋರಾಟದಿಂದ ಪರಿಹಾರ ಸಿಗಲಿ ಎಂದು ಕಾಡುಗೊಲ್ಲರ ವೀರಗಾರ ಜುಂಜಪ್ಪನಲ್ಲಿ ಬೇಡಿಕೊಳ್ಳುತ್ತೇವೆ ಎಂದರು
ಈ ಸಂದರ್ಭದಲ್ಲಿ
ಪ್ರಧಾನ ಕಾರ್ಯದರ್ಶಿಯಾದ ದೇವರಾಜ ರವರು ಮತ್ತು ನಿರ್ದೇಶಕರುಗಳಾದ ಕೃಷ್ಣಪ್ಪ ಎಂ ರಂಗನಾಥಪ್ಪ ಮತ್ತು ಹುಲಿಕುಂಟೆ ಹೋಬಳಿಯ ಸಂಚಾಲಕರಾದ ಕರಿಯಣ್ಣ ಡಿಕೆ ರವರು ಹಾಗೂ ಕಾಡುಗೊಲ್ಲ ಜನಾಂಗದ ಮುಖಂಡರುಗಳು ಹಾಜರಿದ್ದರು ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿಯಾದ ಮ್ಯಾಕ್ಲೂರಹಳ್ಳಿ ಎಸ್ ತಿಮ್ಮಯ್ಯನವರು ಕರ್ನಾಟಕ ಬುಡಕಟ್ಟು ಪರಿಷತ್ತಿನ ಅದ್ಯಕ್ಷರು ಮತ್ತು ವಕೀಲರಾದ ಮಾಲತೇಶ್ ಅರಸ್ ರವರು ಹಾಜರಿದ್ದರು