ವಿಘ್ನ ವಿನಾಶಕನ ಪುರ ಪ್ರವೇಶ
1 min readವಿಘ್ನ ವಿನಾಶಕನ ಪುರ ಪ್ರವೇಶ_________________
ಚಿತ್ರದುರ್ಗ :
ವಿಶ್ವ ಹಿಂದೂ ಪರಿಷತ್ , ಬಜರಂಗದಳದ ವತಿಯಿಂದ ಪ್ರತಿ ವರ್ಷವೂ ಆಚರಿಸುವ ಗಣೇಶೋತ್ಸವಕ್ಕೆ ಈ ವರ್ಷವೂ ಸಹ ಶ್ರೀ ಬಸವ ಮೂರ್ತಿ ಮಾದರ ಚನ್ನಯ್ಯ ಗುರುಪೀಠಕ್ಕೆ ಆಗಮಿಸುವ ವಿನಾಯಕನನ್ನು ಪ್ರತಿ ವರ್ಷದಂತೆ ಮೊದಲಿಗೆ ಚನ್ನಯ್ಯ ಶ್ರೀಮಠಕ್ಕೆ ಸ್ವಾಗತಿಸಲಾಯಿತು. ನಗರದಲ್ಲಿ ಪ್ರತಿಷ್ಠಾಪಿಸುವ ಹಿಂದೂಮಹಾ ಗಣಪನನ್ನು ಶ್ರೀ ಶಿವಶರಣ ಮಾದರ ಚನ್ನಯ್ಯ ಪೀಠಕ್ಕೆ ಗುರುವಾರ ಮಧ್ಯಾಹ್ನ ಶ್ರೀ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮಿಜಿ ಪೂಜೆ ಸಲ್ಲಿಸುವ ಮೂಲಕ ಗಣಪತಿಯನ್ನು ಬರಮಾಡಿಕೊಂಡರು ಈ ಸಂದರ್ಭದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿಯ ರಾಜ್ಯ ಮುಖಂಡ ನವೀನ, ಐ.ಎ.ಎಸ್ ನ ಹಿರಿಯ ಆಧಿಕಾರಿ ಬಿ.ಹೆಚ್. ಅನಿಲ್ ಕುಮಾರ್,ಸೇರಿದಂತೆ, ಬಜರಂಗದಳ,ವಿ ಹೆಚ್ ಪಿ ಕಾರ್ಯಕರ್ತರು, ಸಮುದಾಯದ ಯವಕರು, ಮುಖಂಡರು,ಮತ್ತು ಗುರುಪೀಠದ ಅಪಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.