ಅದ್ದೂರಿಯಾಗಿ ಪ್ರತಿಷ್ಠಾಪಿಸಲಾಗಿರುವ ಏಕತಾ ಹಿಂದೂ ಮಹಾಗಣಪತಿ
1 min readಅದ್ದೂರಿಯಾಗಿ ಪ್ರತಿಷ್ಠಾಪಿಸಲಾಗಿರುವ ಏಕತಾ ಹಿಂದೂ ಮಹಾಗಣಪತಿ
ಚಿತ್ರದುರ್ಗ:
ನಗರದ ಜೋಗಿಮಟ್ಟಿ ರಸ್ತೆಯ ೪ನೇ ಕ್ರಾಸ್ ಬಳಿ ಪ್ರಥಮ ಬಾರಿಗೆ ಅದ್ದೂರಿಯಾಗಿ ಪ್ರತಿಷ್ಠಾಪಿಸಲಾಗಿರುವ ಏಕತಾ ಹಿಂದೂ ಮಹಾಗಣಪತಿ ಸೇವಾ ಸಮಿತಿಯಿಂದ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೊರೊನಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ವಿಶೇಷವಾಗಿ ಈ ಸಮಯದಲ್ಲಿ ನವ ದಂಪತಿಗಳಾದ ವೈ.ಪಿ.ಚಂದ್ರಶೇಖರ್, ಎಂ.ನಂದಿನಿಯವರು ಲಸಿಕೆ ಪಡೆಯುವ ಮೂಲಕ ಏಕತಾ ಹಿಂದೂಮಹಾಗಣಪತಿಯ ಪೂಜಾ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಎಸ್.ಟಿ.ನವೀನ್ಕುಮಾರ್, ಸಮಿತಿಯ ಉಸ್ತುವಾರಿ ಮಾಲತೇಶ್ಅರಸ್ ಹರ್ತಿಕೋಟೆ, ಕನೂನು ಸಲಹೆಗಾರ ಲೀಲಾಧರ ಠಾಕೂರ್ ಹಾಗೂ ಆರೋಗ್ಯ ಇಲಾಖೆಯ ಮೇಲ್ವಿಚಾರಕರು ಇನ್ನಿತರ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.