April 23, 2024

Chitradurga hoysala

Kannada news portal

ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆ ಅನುಷ್ಠಾನಕ್ಕಾಗಿ ಅರ್ಜಿ ಆಹ್ವಾನ

1 min read

ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆ ಅನುಷ್ಠಾನಕ್ಕಾಗಿ ಅರ್ಜಿ ಆಹ್ವಾನ

ಚಿತ್ರದುರ್ಗ,ಸೆಪ್ಟೆಂಬರ್18:
2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿನ ಪಶುಭಾಗ್ಯ ಫಲಾನುಭವಿಗಳ ಆಧಾರಿತ ಕಾರ್ಯಕ್ರಮವನ್ನು “ಮುಖ್ಯ ಮಂತ್ರಿಗಳ ಅಮೃತ ಜೀವನ ಯೋಜನೆ” ಎಂದು ಅನುಷ್ಟಾನಗೊಳಿಸಲು ಮಾರ್ಗಸೂಚಿಗಳಿಗೆ ಅನುಮೋದನೆ ನೀಡಿರುವಂತೆ ಅನುಷ್ಟಾನಗೊಳಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಜಿಲ್ಲೆಗೆ ನಿಗದಿಪಡಿಸಲಾದ ಗುರಿಗಳನ್ನು ತಾಲ್ಲೂಕುವಾರು ಮರುನಿಗದಿಪಡಿಸಲಾಗಿದೆ. ಈ ಯೋಜನೆಯನ್ನು ಅನುಷ್ಟಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಸೆಪ್ಟೆಂಬರ್ 30ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಚಿತ್ರದುರ್ಗ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ (ಸಹಾಯಕ ನಿರ್ದೇಶಕರು) ದೂರವಾಣಿ ಸಂಖ್ಯೆ:9741927007, ಚಳ್ಳಕೆರೆ ಪಶುಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಸಹಾಯಕ ನಿರ್ದೇಶಕರು) ದೂರವಾಣಿ ಸಂಖ್ಯೆ; 9448816499, ಹೊಳಲ್ಕೆರೆ ಪಶುಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಸಹಾಯಕ ನಿರ್ದೇಶಕರು) ದೂರವಾಣಿ ಸಂಖ್ಯೆ-9972965479, ಹೊಸದುರ್ಗ ಪಶುಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಸಹಾಯಕ ನಿರ್ದೇಶಕರು) ದೂರವಾಣಿ ಸಂಖ್ಯೆ-9945298407, ಹಿರಿಯೂರು ಪಶುಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಸಹಾಯಕ ನಿರ್ದೇಶಕರು) ದೂರವಾಣಿ ಸಂಖ್ಯೆ-9448533753, ಮೊಳಕಾಲ್ಮೂರು ಪಶುಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಸಹಾಯಕ ನಿರ್ದೇಶಕರು) ದೂರವಾಣಿ ಸಂಖ್ಯೆ-9449128202ಗೆ ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *