ಸೆಪ್ಟೆಂಬರ್ 26ರೊಳಗಾಗಿ ಬಿಡಾಡಿ ಹಂದಿಗಳನ್ನು ತೆರವುಗೊಳಿಸಲು : ನಗರಸಭೆ ಪೌರಾಯುಕ್ತ ಸೂಚನೆ :
1 min readಬಿಡಾಡಿ ಹಂದಿಗಳ ತೆರವುಗೊಳಿಸಲು ಸೂಚನೆ
ಚಿತ್ರದುರ್ಗ,ಸೆಪ್ಟೆಂಬರ್21
ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತುಂಬಾ ಅಡಚಣೆ ಉಂಟಾಗುತ್ತಿದ್ದು, ನಗರದ ಸ್ವಚ್ಛತೆಗೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ.
ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದರಿಂದ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಇದುವರೆಗೂ ಬಿಡಾಡಿ ಹಂದಿಗಳನ್ನು ಹಂದಿ ಮಾಲೀಕರು ಸಾರ್ವಜನಿಕ ಪ್ರದೇಶಗಳಿಂದ ತೆರವುಗೊಳಿಸದೇ ಇರುವುದರಿಂದ ಸೆಪ್ಟೆಂಬರ್ 26ರೊಳಗಾಗಿ ಬಿಡಾಡಿ ಹಂದಿಗಳನ್ನು ತೆರವುಗೊಳಿಸಲು ಅಂತಿಮವಾಗಿ ತಿಳುವಳಿಕೆ ನೀಡಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.