ಕ್ರೀಡೆಯಿಂದ ಅರೋಗ್ಯ ವೃದ್ಧಿ : ಸಿದ್ದಯ್ಯನಕೋಟೆ ಶ್ರೀ ಗಳು
1 min readಕ್ರೀಡೆಯಿಂದ ಅರೋಗ್ಯ ವೃದ್ಧಿ :ಸಿದ್ದಯ್ಯನಕೋಟೆ ಶೀ ಬಸವಲಿಂಗ ಸ್ವಾಮೀಜಿ
ಮೊಳಕಾಲ್ಮುರು:
ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡರೆ ಯಾವುದೇ ತರಹದ ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ ಎಂದು ಸಿದ್ದಯ್ಯನಕೋಟೆಯ ಇಳಕಲ್ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು,
ಅವರು ನಗರದಲ್ಲಿ ಶನಿವಾರ ಎಂಎಲ್ ಕೆ ಯಂಗ್ ಸ್ಟಾರ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಮೆಂಟ್ ನ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು, ನಮ್ಮ ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಈ ಪ್ರದೇಶದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ. ಚಟಗಳಿಗೆ ಬಲಿಯಾಗದೆ ದಿನನಿತ್ಯ ಬೆಳಗಿನ ಜಾವ ಯೋಗ ಮತ್ತು ಧ್ಯಾನ ಮತ್ತು ಕ್ರೀಡೆಯಿಂದ ನಮ್ಮ ಕಾಯ ಸದೃಢವಾಗಿರುತ್ತದೆ, ಜೊತೆಗೆ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡುವುದರಿಂದ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಹ ದೊರಕುವುದು, ಆರೋಗ್ಯವೇ ಭಾಗ್ಯ ಎನ್ನುವ ನಾವು ಆರೋಗ್ಯ ಕಾಪಾಡಿಕೊಳ್ಳುವ ಕಡೆಗೆ ಗಮನನೀಡಬೇಕು ಎಂದರು.
ಅಲ್ಲಮ ಪ್ರಭುದೇವರು ಹೇಳುವಂತೆ ಹೊನ್ನು ನಿನ್ನದಲ್ಲ ಮಣ್ಣು ನಿನ್ನದಲ್ಲ ನಿನ್ನೊಡನೆ ಇರುವ ಜ್ಞಾನರತ್ನ ಸದಾ ಜೊತೆ ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕಾಂತರಾಜ್ ನಮ್ಮ ತಾಲೂಕಿನಲ್ಲಿ ಕ್ರೀಡಾಂಗಣ ಮತ್ತು ಸಾಂಸ್ಕೃತಿಕ ಭವನದ ಅವಶ್ಯಕತೆ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಮೂಲಕ ಗಮನಹರಿಸಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು .
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ, ವಾಣಿಜ್ಯೋದ್ಯಮಿ ಕೆಸಿ ವೀರೇಂದ್ರ, ಖಾದರ್, ಮುಖಂಡರು ಭಾಗವಹಿಸಿದ್ದರು