April 25, 2024

Chitradurga hoysala

Kannada news portal

ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರವರೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಗಾಂಧಿಜಯಂತಿ ಕಾರ್ಯಕ್ರಮ. ಯೋಜನಾ ನಿರ್ದೇಶಕ ಸತೀಶ್‍ರೆಡ್ಡಿ

1 min read

ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರವರೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಗಾಂಧಿಜಯಂತಿ ಕಾರ್ಯಕ್ರಮ

 

ಚಿತ್ರದುರ್ಗ,ಸೆಪ್ಟೆಂಬರ್ 29:
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಗಾಂಧಿಜಯಂತಿ ಪ್ರಯುಕ್ತ ಸೆಪ್ಟೆಂಬರ್ 29 ರಿಂದ ಆಕ್ಟೋಬರ್ 2 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಚಿತ್ರದುರ್ಗ ನಗರಸಭಾ ಕಾರ್ಯಾಲಯ: ಸೆಪ್ಟೆಂಬರ್ 30 ರಂದು ಕರಿಯಪ್ಪನ ಹಟ್ಟಿಯಲ್ಲಿ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳಿಂದ ವಸತಿ ಪ್ರಾದೇಶಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ, ಅಕ್ಟೋಬರ್ 1 ರಂದು ಸಂತೆ ಮೈದಾನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕುರಿತು ಜಾಗೃತಿ ಕಾರ್ಯಕ್ರಮ, ಅಕ್ಟೋಬರ್ 2 ರಂದು ಗಣೇಶ ದೇವಸ್ಥಾನದ ಹತ್ತಿರ ಜೆ.ಸಿ.ಆರ್ ಬಡವಾಣೆಯಲ್ಲಿ ಜನರ ಪಾಲುದಾರಿಕೆಯೊಂದಿಗೆ ಸ್ವಚ್ಚ ಸಾರ್ವಜನಿಕ ಅಮೃತ ಮಹೋತ್ಸವ ಹಾಗೂ ಉತ್ತಮ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ.

ಚಳ್ಳಕೆರೆ ನಗರಸಭಾ ಕಾರ್ಯಾಲಯ: ಸೆಪ್ಟೆಂಬರ್ 30 ರಂದು ಹಳೇಟೌನ್‍ನಲ್ಲಿನ ಶೌಚಾಲಯಗಳ ಸ್ವಚ್ಚತೆ, ಅಕ್ಟೋಬರ್ 1 ರಂದು ಕಚೇರಿ ಆವರಣ ಉತ್ತಮ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ, ಅಕ್ಟೋಬರ್ 2 ರಂದು ತ್ಯಾಗರಾಜ ನಗರ ಸಸಿ ನೆಡುವ ಕಾರ್ಯಕ್ರಮ.

ಹಿರಿಯೂರು ನಗರಸಭಾ ಕಾರ್ಯಾಲಯ: ಸೆಪ್ಟೆಂಬರ್ 30 ರಂದು ಮುಖ್ಯ ರಸ್ತೆ ಹಿರಿಯೂರು ಶೌಚಾಲಯಗಳ ಸ್ವಚ್ಚತೆ, ಅಕ್ಟೋಬರ್ 1 ರಂದು ಲಕ್ಷಮ್ಮ ಬಡಾವಣೆ ಹಿರಿಯೂರು ತ್ಯಾಜ್ಯ ಉದ್ಯಮಿಗಳ ಸನ್ಮಾನ, ಅಕ್ಟೋಬರ್ 2 ರಂದು ವೇದಾವತಿ ನಗರ ಹಿರಿಯೂರು ಸ್ವಚ್ಚತಾ ಕಾರ್ಯಕ್ರಮ.

ಹೊಸದುರ್ಗ ಪುರಸಭಾ ಕಾರ್ಯಾಲಯ: ಸೆಪ್ಟೆಂಬರ್ 30ರಂದು ಟಿಬಿ ಸರ್ಕಲ್‍ನಲ್ಲಿ ಶೌಚಾಲಯಗಳ ಸ್ವಚ್ಚತೆ, ಅಕ್ಟೋಬರ್ 1 ರಂದು ಕಚೇರಿ ಆವರಣದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ, ಅಕ್ಟೋಬರ್ 2 ರಂದು ಶಾಂತಿನಗರದಲ್ಲಿ ಕೊಳಚೆ ಪ್ರದೇಶ ಸ್ವಚ್ಚತಾ ಕಾರ್ಯಕ್ರಮ.

ಹೊಳಲ್ಕೆರೆ ಪುರಸಭಾ ಕಾರ್ಯಾಲಯ: ಸೆಪ್ಟೆಂಬರ್ 30 ರಂದು ಹೊಳಲ್ಕೆರೆಯ ಮುಖ್ಯ ವೃತ್ತದಲ್ಲಿ ಶೌಚಾಲಯಗಳ ಸ್ವಚ್ಚತೆ, ಅಕ್ಟೋಬರ್ 1 ರಂದು ಹೊಳಲ್ಕೆರೆಯ ಪುರಸಭೆ ಕಚೇರಿ ಆವರಣದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ, ಅಕ್ಟೋಬರ್ 2 ರಂದು ಹೊಸ ಸಿದ್ದಪ್ಪ ಬಡಾವಣೆ ಪಾರ್ಕ್ ಹೊಳಲ್ಕೆರೆ ಸಸಿ ನೆಡುವ ಕಾರ್ಯಕ್ರಮ.
ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಕಾರ್ಯಾಲಯ: ಸೆಪ್ಟೆಂಬರ್ 30 ರಂದು ಬೋವಿ ಕಾಲೋನಿ ಶೌಚಾಲಯಗಳ ಸ್ವಚ್ಚತೆ, ಅಕ್ಟೋಬರ್ 1 ರಂದು ಕಾರ್ಯಾಲಯದಲ್ಲಿ ಆವರಣದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ, ಅಕ್ಟೋಬರ್ 2 ರಂದು ಮಾರುತಿ ಬಡಾವಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮ.
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾರ್ಯಾಲಯ: ಸೆಪ್ಟೆಂಬರ್ 30 ರಂದು ವಾರ್ಡ್ ನಂ-7ರಲ್ಲಿ ಶೌಚಾಲಯಗಳ ಸ್ವಚ್ಚತೆ, ಅಕ್ಟೋಬರ್ 1 ರಂದು ಕಚೇರಿ ಆವರಣದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ, ಅಕ್ಟೋಬರ್ 2 ರಂದು ವಾರ್ಡ್ ನಂ-5ರಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಯೋಜನಾ ನಿರ್ದೇಶಕರಾದ ಸತೀಶ್‍ರೆಡ್ಡಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *