ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಮತ್ತು ಮಾಜಿ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಜನಾಂಗದ ಹಿರಿಯ ಮುಖಂಡರ ಚಿಕ್ಕಪುರದ ಹನುಮಂತಪ್ಪ ನಿಧನ
1 min read
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಮತ್ತು ಮಾಜಿ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಜನಾಂಗದ ಹಿರಿಯ ಮುಖಂಡರ ಚಿಕ್ಕಪುರದ ಹನುಮಂತಪ್ಪ ನಿಧನ
ಚಿತ್ರದುರ್ಗ:
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಮತ್ತು ಮಾಜಿ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಾಗೂ ಕಾಡುಗೊಲ್ಲ ಜನಾಂಗದ ಹಿರಿಯ ಮುಖಂಡರ ಚಿಕ್ಕಪುರದ ಹನುಮಂತಪ್ಪ ಗುರುವಾರ ಬೆಳಗಿನ ಜಾವ ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಮೃತರಿಗೆ ಮೂರು ಜನ ಹೆಣ್ಣು ಮಕ್ಕಳು ಎರಡು ಜನ ಗಂಡು ಮಕ್ಕಳು ಮತ್ತು ಹೆಂಡತಿ ಸೇರಿ ಅಪಾರ ಪ್ರಮಾಣದಲ್ಲಿ ಬಂಧು ಮಿತ್ರರನ್ನು ಅಗಲಿದ್ದಾರೆ.
ಶ್ರೀ ಯುತರು ಸಮಾಜಕ್ಕೆ ಮತ್ತು ಕಾಡುಗೊಲ್ಲ ಜನಾಂಗಕ್ಕೆ ಅಪಾರ ಸೇವೆ ಮಾಡಿದ್ದಾರೆ ಕಾಡುಗೊಲ್ಲ ಜನಾಂಗಕ್ಕೆ ಅವರ ಸಾವಿನಿಂದ ತುಂಬಲಾರದ ನಷ್ಟ ವುಂಟಾಗಿದೆ ಅವರ ಸಾವಿನಿಂದ ಒಬ್ಬ ಜನಾನುರಾಗಿ ಜನಪ್ರಿಯ ಮುಖಂಡರನ್ನು ಕಾಡುಗೊಲ್ಲ ಸಮಾಜ ಕಳೆದುಕೊಂಡತಾಗಿದೆ ಅವರ ಆಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿ ಮತ್ತು ಬಂದು ಬಾಂದವರಿಗೆ ದೇವರು ನೀಡಲಿ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾದ್ಯಕ್ಷರಾದ ಶಿವುಯಾದವ್ ಮತ್ತು ಕಾಂಗ್ರಸ್ ನ ಮುಖಂಡರಾದ ಹಿರೆಬೇನ್ನರು ವಿಜಯಕುಮಾರ್, ನಗರ ಸಭೆ ಮಾಜಿ ಸದಸ್ಯ ಕುಮಾರ್, ಗೂಲ್ಲರಹಟ್ಟಿ ಗ್ರಾಮ.ಪಂ ಸದಸ್ಯ ವೆಂಕಟೇಶ್, ಮಖಂಡ ಪ್ರಕಾಶ್,ಸೂಸೈಟಿ ಕಾರ್ಯದರ್ಶಿ ಪ್ರಸನ್ನ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ