April 20, 2024

Chitradurga hoysala

Kannada news portal

ಚಿತದುರ್ಗದಲ್ಲಿ ಅತ್ಯಂಧಿಕ ಮಳೆ:ವಾಲಿಬಾಲ್ ಪಂದ್ಯಾವಳಿ ರದ್ದು ಆಹಾರ ಮೇಳ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನವೂ ಸ್ಥಗಿತ ಶರಣ ಸಂಸ್ಕøತಿ ಉತ್ಸ ವದ ಅಧ್ಯಕ್ಷರಾದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ.

1 min read

 

ಚಿತದುರ್ಗದಲ್ಲಿ ಅತ್ಯಂಧಿಕ ಮಳೆ: ವಾಲಿಬಾಲ್ ಪಂದ್ಯಾವಳಿ ರದ್ದು

ಆಹಾರ ಮೇಳ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನವೂ ಸ್ಥಗಿತ

ಶರಣ ಸಂಸ್ಕøತಿ ಉತ್ಸವದ ಅಧ್ಯಕ್ಷರಾದ  ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ.

ಚಿತ್ರದುರ್ಗ:

ಶರಣ ಸಂಸ್ಕøತಿ ಉತ್ಸವದ ಹಿನ್ನೆಲೆಯಲ್ಲಿ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರದಿಂದ ನಡೆಯಬೇಕಿದ್ದ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ, ಆಹಾರ ಮೇಳ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಅತ್ಯಧಿಕ
ಮಳೆಯಿಂದಾಗಿ ರದ್ದುಪಡಿಸಲಾಗಿದೆ ಎಂದು ಶರಣ ಸಂಸ್ಕøತಿ ಉತ್ಸವದ ಅಧ್ಯಕ್ಷ ರಾದ ಶ್ರೀ ಬಸವಮೂರ್ತಿ ಮಾದಾರ
ಚನ್ನಯ್ಯ ಸ್ವಾಮೀಜಿ ಹೇಳಿದರು.ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಕೋರ್ಟ್‍ನ್ನು
ವಿಶೇಷ ಹಾಗೂ ಸುಸಜ್ಜಿತವಾಗಿ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾದ ತಜ್ಞರ ಪ್ರಕಾರ ಪಂದ್ಯಾವಳಿ ನಡೆಸುವುದು ಕಷ್ಟವಾಗಿರುವ ಕಾರಣಕ್ಕೆ
ಅನಿವಾರ್ಯವಾಗಿ ರದ್ದುಪಡಿಸಿ ಮುಂದಿನ ಜನವರಿ ಇಲ್ಲವೆ
ಫೆಬ್ರವರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುವುದು.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನು ಮೂರು ದಿನಗಳ ಕಾಲ ಮಳೆಯಾಗುವ ಸಂಭವವಿರುವುದರಿಂದ
ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ, ಆಹಾರ ಮೇಳ, ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಸೇರಿದಂತೆ ಈ
ಜಾಗದಲ್ಲಿ ನಡೆಯುವ ಎಲ್ಲಾ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಯಾರು
ನಿರಾಶರಾಗುವುದು ಬೇಡ ಎಂದು ಮಾದರ ಶ್ರೀ ಗಳು ಮನವಿ
ಮಾಡಿದರು.ಪತ್ರಿಕಾಗೋಷ್ಟಿಯಲ್ಲಿ ಶಮಿವುಲ್ಲಾ, ಮುಜಿಬುಲ್ಲಾ,
ಕೆ.ಹೆಚ್.ಶಿವರಾಂ, ಸೋಮಶೇಖರ್, ತಿಮ್ಮಣ್ಣ ಹಾಜರಿದ್ದರು.

About The Author

Leave a Reply

Your email address will not be published. Required fields are marked *