ಬತ್ತಿಹೋಗಿದ್ದ ಭರಮಣ್ಣ ನಾಯಕರ ಕೆರೆಗೆ ವರ್ಷದಲ್ಲಿಯೇ ತುಂಗಾಭದ್ರದಿಂದ ನೀರು ತುಂಬಿಸಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ನಾವೆಲ್ಲರೂ ಗೌರವಪೂರ್ವಕವಾಗಿ ಸ್ಮರಿಸಬೇಕು ಮಾಜಿ ಸಚಿವ ಹೆಚ್.ಆಂಜನೇಯ
1 min readಬತ್ತಿಹೋಗಿದ್ದ ಭರಮಣ್ಣ ನಾಯಕರ ಕೆರೆಗೆ ವರ್ಷದಲ್ಲಿಯೇ ತುಂಗಾಭದ್ರದಿಂದ ನೀರು ತುಂಬಿಸಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ನಾವೆಲ್ಲರೂ ಗೌರವಪೂರ್ವಕವಾಗಿ ಸ್ಮರಿಸಬೇಕು ಮಾಜಿ ಸಚಿವ ಹೆಚ್.ಆಂಜನೇಯ
ಭರಮಸಾಗರ :ಅ ೧೧ ಭರಮಸಾಗರ ಏತ ನೀರಾವರಿ ಯೋಜನೆಯಡಿಯಲ್ಲಿ ಐತಿಹಾಸಿಕ ಭರಮಣ್ಣ ನಾಯಕನ ಕೆರೆಗೆ ತುಂಗಾಭದ್ರ ನದಿಯಿಂದ ನೀರು ಹರಿದು ಬರುತ್ತಿರುವ ಸಂಭ್ರಮವನ್ನು ವೀಕ್ಷಿಸಲು ಸೋಮವಾರ ಆಗಮಿಸಿದ್ದ ಸಿರಿಗೆರೆ ಶ್ರೀ.ತರಳಬಾಳು ಜಗದ್ಗುರು ಪರಮಪೂಜ್ಯ ಶ್ರೀ.ಶ್ರೀ.ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳೊಂದಿಗೆ ಮಾಜಿ ಸಚಿವ ಎಚ್.ಆಂಜನೇಯ ವೀಕ್ಷಣೆ ಮಾಡಿದರು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಮಾಜಿ ಸಚಿವ ಶ್ರೀ.ಎಚ್.ಆಂಜನೇಯರವರು, ಬತ್ತಿಹೋಗಿದ್ದ ಭರಮಸಾಗರದ ಐತಿಹಾಸಿಕ ಭರಮಣ್ಣ ನಾಯಕರ ಕೆರೆಗೆ ಒಂದು ವರ್ಷದಲ್ಲಿಯೇ ವೇಗವಾಗಿ ತುಂಗಾಭದ್ರದಿಂದ ನೀರು ತುಂಬಿಸಿರುವ ತರಳಬಾಳು ಜಗದ್ಗುರು ಶ್ರೀ.ಶ್ರೀ.ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ನಾವೆಲ್ಲರೂ ಗೌರವಪೂರ್ವಕವಾಗಿ ಸ್ಮರಿಸಬೇಕು.ಗುರುಗಳ ಇಚ್ಛಾಶಕ್ತಿಯಿಂದ ರೈತರ ಮೇಲಿನ ಕಾಳಜಿಯಿಂದ ಇದೀಗ ಕೆರೆಗೆ ನೀರು ಹರಿಸುವಲ್ಲಿ ಕಾರಣರಾಗಿದ್ದಾರೆ.ಅದರ ಜತೆಗೆ ಶಿಕ್ಷಣದ ಬಗ್ಗೆ ಸಾಕಷ್ಟು ಸೇವೆ ಮಾಡಿದ್ದಾರೆ. ಸಿರಿಗೆರೆ ಮಠವು ಜನರಿಗಾಗಿ, ಜನರ ಕಲ್ಯಾಣಕ್ಕಾಗಿ, ಜನತೆಯ ಬದುಕು ಹಸನು ಮಾಡಲು ನಿಸ್ವಾರ್ಥ ಸೇವೆಯಿಂದ ಕೆಲಸ ಮಾಡುತ್ತಿದೆ ಎಂದರು.
ಭರಮಸಾಗರ ಏತನೀರಾವರಿ ಯೋಜನೆಯನ್ನು ಸಿರಿಗೆರೆ ತರಳಬಾಳು ಪರಮಪೂಜ್ಯ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನೀರಾವರಿ ಯೋಜನೆಯಂದು ನಾಮಕರಣ ಮಾಡಬೇಕು.ಹಾಗೆಯೇ ಕೆರೆಪಕ್ಕದಲ್ಲಿಯೇ ಸುಮಾರು ೩೦ ಅಡಿ ಎತ್ತರದ ಶ್ರೀಗಳ ಪ್ರತಿಮೆ ಅನಾವರಣ ಮಾಡಬೇಕೆನ್ನುವ ಅಭಿಲಾಷೆ ವ್ಯಕ್ತಪಡಿಸಿದರು.