April 19, 2024

Chitradurga hoysala

Kannada news portal

ಅಯೋಧ್ಯಾ ರಾಮಮಂದಿರದ ಸಂಪೂರ್ಣ ಇತಿಹಾಸ

1 min read

ಉತ್ತರ ಪ್ರದೇಶದ ಅಯೋಧ್ಯಾ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿಷಯದ ವಿವಾದ ದಶಕಗಳ ಇತಿಹಾಸ ಹೊಂದಿದೆ. ಭಾರತದಲ್ಲಿ ಅಯೋಧ್ಯೆ ರಾಮಮಂದಿರ ವಿವಾದ ಎನ್ನುವುದು ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಸ್ಥಾನ ಹೊಂದಿದೆ. 1528ರಲ್ಲಿ ಇಲ್ಲಿ ಬಾಬರಿ ಮಸೀದಿ ನಿರ್ಮಾಣವಾಗಿತ್ತು ಎನ್ನುವ ವಾದ. ಆದರೆ 1885ರಿಂದ ಈ ಕುರಿತು ಕಾನೂನು ಹೋರಾಟ ನಡೆಯುತ್ತಲೇ ಇದೆ. ಇದಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದು ನವೆಂಬರ್‌ 9, 2019ರಲ್ಲಿ. ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಇತಿಹಾಸವನ್ನೊಮ್ಮೆ ಅವಲೋಕನ ಮಾಡಿದರೆ ಹಲವಾರು ಘಟನೆಗಳು ದಾಖಲಾಗಿವೆ. ಅದರಲ್ಲಿ ಪ್ರಮುಖವಾಗಿರುವುದು ನೆನಪಿಸಿಕೊಳ್ಳೋಣ. 

ಅಯೋಧ್ಯೆ: ಇತಿಹಾಸದ ಅವಲೋಕನ

1528 : ಮೊಘಲ್ ಸಾಮ್ರಾಟ್ ಬಾಬರ್ ಅವರಿಂದ ಮಸೀದಿಯ ನಿರ್ಮಾಣ. ಅದಕ್ಕೆ ಬಾಬ್ರಿ ಮಸೀದಿ ಎಂಬ ಹೆಸರು. ಆದರೆ ಹಿಂದೂಗಳ ಪ್ರಕಾರ ಈ ಮಸೀದಿಯನ್ನು ಹಿಂದೂ ಮಂದಿರವನ್ನು ಕೆಡವಿ ನಿರ್ಮಿಸಲಾಗಿದೆ 

1853: ನಿರ್ಮೋಹಿ ಅಖಾಡದಿಂದ ಬಲವಂತವಾಗಿ ಬಾಬ್ರಿ ಮಸೀದಿ ವಶಕ್ಕೆ. ಈ ಮೂಲಕ ಮೊದಲ ಬಾರಿಗೆ ಅಯೋಧ್ಯಾದಲ್ಲಿ ಕೋಮು ಗಲಭೆ ಸೃಷ್ಠಿ. 

1859:
 ವಿವಾದಿತ ಸ್ಥಳವನ್ನು ಹಿಂದೂ-ಮುಸ್ಲಿಮರಿಗೆ ಹಂಚಿಕೆ ಮಾಡಿ ದೈವಾರಾಧನೆ ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ ಬ್ರಿಟಿಷ್ ಸರಕಾರ. 

1885: ಹಿಂದೂ ಪೂಜಾರಿ ಮಹಾಂತ ರಘುವರ್ ದಾಸ್ ರಿಂದ ವಿವಾದಿತ ಸ್ಥಳದ ಮಾಲೀಕತ್ವಕ್ಕಾಗಿ ಮತ್ತು ಮಸೀದಿಯ ಹೊರಗಿನ ರಾಮ ಚಬುತ್ರಾಕ್ಕೆ ಮೇಲ್ಚಾವಣಿ ಹಾಕಲು ಅವಕಾಶ ಕೋರಿ ಫಜಿಯಾಬಾದ್ ಕೋರ್ಟಗೆ ಅರ್ಜಿ, ಅರ್ಜಿ ತಿರಸ್ಕೃತ. 

1949: ಡಿಸೆಂಬರ್‌ನಲ್ಲಿ ವಿವಾದಿತ ಸ್ಥಳದಲ್ಲಿ ರಾಮನ ಮೂರ್ತಿ ಗುಂಬಜ್ ಒಳಗೆ ಪ್ರತಿಷ್ಠಾಪನೆ. ಉಭಯ ಕಡೆಯಿಂದ ಕೋರ್ಟ್ ನಲ್ಲಿ ಅರ್ಜಿ, ಅಯೋಧ್ಯೆಯನ್ನು ವಿವಾದಿತ ಭೂಮಿಯೆಂದು ಪರಿಗಣಿಸಿ, ನಿರ್ಭಂದನೆ ಹೇರಿದ ಕೋರ್ಟ್ 

1959: ರಾಮ ಮಂದಿರವನ್ನು ತಮ್ಮ ಸುಪರ್ದಿಗೆ ನೀಡಬೇಕೆಂದು ಕೋರಿ ಫಜಿಯಾಬಾದ್ ನ್ಯಾಯಾಲಯಕ್ಕೆ ನಿರ್ಮೊಹಿ ಆಖಾಡ ಅರ್ಜಿ 

1961:
 ಅಯೋಧ್ಯಾ ಭೂಮಿಯನ್ನು ತಮ್ಮ ವಶಕ್ಕೆ ಕೋರಿ ಮತ್ತು ರಾಮ ಮೂರ್ತಿಯನ್ನು ತೆಗೆಯಲು ಅನುಮತಿ ಕೋರಿ ಸುನ್ನಿ ವಾಕ್ಫ ಕಮಿಟಿ ಅರ್ಜಿ . 

1984:
 ವಿಶ್ವಹಿಂದೂ ಪರಿಷತ್ ನಿಂದ ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಪ್ರಚಾರ ಸಭೆ ಆರಂಭ. 

1986:
 ಮಸೀದಿ ಗೆಟ್‍ಗಳನ್ನು ತೆರೆದು ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ಫಾಜಿಯಾಬಾದ್ ಕೋರ್ಟ್ . ನ್ಯಾಯಾಲಯದ ಈ ತೀರ್ಪು ವಿರೋಧಿಸಿದ ಬಾಬ್ರಿ ಮಸೀದಿ ಕಮಿಟಿ. 

1989: ಬಾಬ್ರಿ ಮಸೀದಿ ಪಕ್ಕದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಅಡಿಗಲ್ಲು ಹಾಕಿದ ವಿಶ್ವಹಿಂದೂ ಪರಿಷತ್ . 

1990:
 ಸೋಮನಾಥ್‍ದಿಂದ ಅಯೋಧ್ಯಾವರೆಗೆ ರಥ ಯಾತ್ರೆ ಆಯೋಜಿಸಿ ರಾಮ ಜನ್ಮ ಭೂಮಿ ಕುರಿತು ಜನರಲ್ಲಿ ಅರಿವು ಮೂಡಿಸಲು ಮುಂದಾದ ಆಗಿನ ಬಿಜೆಪಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ. 

1991: ಅಯೋಧ್ಯಾ ಮುಂದೆ ಒಗ್ಗಟ್ಟಾದ ಸಾವಿರಾರು ಮಂದಿ ಕರಸೇವಕರು. 
1992: ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಕರಸೇವಕರು ಮತ್ತು ಈ ಸಮಯದಲ್ಲಿ 2000ಕ್ಕೂ ಹೆಚ್ಚು ಕಾರ್ಯಕರ್ತರ ಸಾವು. ಜೊತೆಗೆ ಆಗ ಆಡಳಿತದಲ್ಲಿದ್ದ ಪಿ.ವಿ.ನರಸಿಂಹ ರಾವ್ ಸರ್ಕಾರ ಲಿಬರನ್ ಆಯೋಗ ರಚನೆ ಮಾಡಿ ಆಯೋಧ್ಯಾ ಮತ್ತು ಬಾಬ್ರಿ ಮಸೀದಿ ವಿವಾದ ಕುರಿತು ವರದಿ ನೀಡಲು ಸೂಚನೆ. 

1993: ಎಲ್.ಕೆ.ಅಡ್ವಾಣಿ ಸೇರಿ ಹಲವರ ಮೇಲೆ ಚಾರ್ಜಶೀಟ್ ಹಾಕಿದ ಸಿಬಿಐ. 

1997:
 ಎಲ್.ಕೆ.ಅಡ್ವಾಣಿ ಸೇರಿದಂತೆ 49 ಜನರ ಮೇಲೆ ಅಯೋಧ್ಯಾ ವಿವಾದದ ಕುರಿತು ಆರೋಪಪಟ್ಟಿ ಬಿಡುಗಡೆ ಮಾಡಿದ ವಿಶೇಷ ನ್ಯಾಯಾಲಯ. 

2001: ಅಡ್ವಾಣಿ ಸೇರಿದಂತೆ 13 ಜನರ ಮೇಲಿನ ಪಿತೂರಿ ಆರೋಪವನ್ನು ತಳ್ಳಿಹಾಕಿದ ನ್ಯಾಯಾಧೀಶ ಎಸ್.ಕೆ.ಶುಕ್ಲಾ. 

2002: ಅಯೋಧ್ಯಾ ಭೂ ವಿವಾದದ ಕುರಿತು ವರದಿ ನೀಡಲು ಪುರಾತತ್ವ ಇಲಾಖೆಗೆ ಸೂಚನೆ ನೀಡಿದ ಲಖನೌ ಅಲಹಾಬಾದ್ ಪೀಠ. 

2003:
 ಮಸೀದಿಯ ಕೆಳಗೆ ದೇವಾಲಯ ಇರುವ ವಿಚಾರವನ್ನು ನ್ಯಾಯಾಲಯದ ಮುಂದಿಟ್ಟ ಪುರಾತತ್ವ ಇಲಾಖೆ. 

2010: ವಿವಾದಿತ ಭೂಮಿಯನ್ನು ಮೂರು ಭಾಗ ಮಾಡಿ ಮೂರನೇ ಒಂದು ಭಾಗವನ್ನು ಅಖಿಲ ಭಾರತೀಯ ಹಿಂದೂ ಮಹಾಸಭಾ ಸುರ್ಪದಿಗೆ, ಮೂರನೇ ಒಂದು ಭಾಗವನ್ನು ಸುನ್ನಿ ವಾಕ್ಫ ಕಮಿಟಿಗೆ ಹಾಗೂ ಉಳಿದ ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಲು ಹೈಕೋರ್ಟ್ ತೀರ್ಪು. 

2011: ಭೂಮಿ ಭಾಗ ಮಾಡುವ ವಿಚಾರವನ್ನು ವಿರೋಧಿಸಿದ ಅರ್ಜಿ ಸಲ್ಲಿಸಿದ ಹಿಂದೂ ಮುಸ್ಲಿಂ ಸಂಘಟನೆ. ಸುಪ್ರಿಂ ಹೈಕೋರ್ಟ ತೀರ್ಪನ್ನು ತಡೆಹಿಡಿಯಿತು. 

2017: ಅಡ್ವಾಣಿ ಸೇರಿ 13 ಜನರ ಮೇಲಿನ ಪಿತೂರಿ ಪ್ರಕರಣವನ್ನು ಮರುಪರಿಶೀಲಿಸಿ ಫೆಬ್ರವರಿ 8ಕ್ಕೆ ವಿಚಾರಣೆಯನ್ನು ಕಾಯ್ದಿರಿಸಿದ ಸುಪ್ರಿಂ ಕೋರ್ಟ್ . 

2018: ಜುಲೈನಲ್ಲಿ 1994ರ ಮಸೀದಿ ಇಸ್ಲಾಂನ ಅಂತರ್ಗತ ಭಾಗವಲ್ಲ ಎಂಬ ತೀರ್ಪನ್ನು ಪ್ರಶ್ನಿಸುವ ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂ ಜನವರಿ ಮೊದಲ ವಾರದಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿಕೆ. 

2019: ಜನವರಿ 8ರಂದು ಅಯೋಧ್ಯಾ ವಿವಾದ ವಿಚಾರಣೆ ನಡೆಸಲು ಪಂಚ ಸದಸ್ಯ ಪೀಠ ರಚನೆ, ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿದ ಪೀಠ 

2019: ಜನವರಿ 29 ರಂದು ಅಯೋಧ್ಯಾ ಹೆಚ್ಚುವರಿ ಭೂಮಿಯನ್ನು ಹಕ್ಕುದಾರರಿಗೆ ನೀಡಲು ಅನುಮತಿ ಕೇಳಿದ ಮೋದಿ ಸರ್ಕಾರ. 

2019: ಮಾರ್ಚ್ 8 ರಂದು ಸಂಧಾನ ಸಮಿತಿ ರಚಿಸಿ, ಮಾತುಕತೆಯ ಮೂಲಕ ಪರಿಹಾರ ಕಂಡುಕೊಂಡು 8 ವಾರಗಳೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ. 

2019: ಆಗಸ್ಟ್‌ 1ರಂದು ಕೋರ್ಟ್‌ ಸಂಧಾನ ಸಮಿತಿಯಿಂದ ವರದಿ ಸಲ್ಲಿಕೆ. ಸಂಧಾನ ವಿಫಲವಾಗಿದೆ ಎಂದ ಕೋರ್ಟ್‌. ಪ್ರತಿದಿನ ವಿಚಾರಣೆ ನಡೆಸಿ ಪ್ರಕರಣ ಮುಕ್ತಾಯಗೊಳಿಸಲು ಮುಂದಾದ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ. 
2019: ಆಗಸ್ಟ್ 6ರಿಂದ ಪ್ರತಿ ದಿನ 40 ದಿನಗಳ ಸತತ ವಿಚಾರಣೆ ನಡೆಸಿದ ಐದು ಮಂದಿಯ ಸಂವಿಧಾನ ಪೀಠ, ಅಕ್ಟೋಬರ್ 16ರಂದು ವಿಚಾರಣೆ ಮುಕ್ತಾಯ. 

2019: ನವೆಂಬರ್ 9ಕ್ಕೆ ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ಪಂಚ ಸದಸ್ಯಪೀಠ, 2.77 ಎಕರೆ ವಿವಾದಿತ ಜಮೀನು ರಾಮ್‌ಲಲ್ಲಾಗೆ ಸೇರಿದ್ದು , ಮೂರು ತಿಂಗಳೊಳಗೆ ಟ್ರಸ್ಟ್‌ ರಚಿಸಿ ಸರಕಾರವೇ ಮಂದಿರ ನಿರ್ಮಿಸಬೇಕು . ಜೊತೆಗೆ ಸುನ್ನಿ ವರ್ಕ್‌ ಬೋರ್ಡ್‌ಗೆ ಮಸೀದಿ ನಿರ್ಮಾಣ ಮಾಡಲು 5 ಎಕರೆ ಭೂಮಿ ನೀಡಬೇಕು ಎಂದಿದೆ. 

About The Author

Leave a Reply

Your email address will not be published. Required fields are marked *