April 19, 2024

Chitradurga hoysala

Kannada news portal

ಸಾರ್ವಜನಿಕರರ ಕುಂದುಕೊರತೆಗಳ ಇತ್ಯರ್ಥಕ್ಕೆ ವಿಶೇಷ ಕಾರ್ಯಕ್ರಮ. ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸುವ ಕುರಿತು ಕ್ರಮ: ಪೌರಾಯುಕ್ತ ಉಮೇಶ್

1 min read



ಸಾರ್ವಜನಿಕರರ – ಕುಂದು – ಕೊರತೆಗಳ ಇತ್ಯರ್ಥಕ್ಕೆ ವಿಶೇಷ ಕಾರ್ಯಕ್ರಮ: ಸಾರ್ವಜನಿಕರ ಕುಂದು – ಕೊರತೆಗಳನ್ನು ಪರಿಹರಿಸುವ ಕುರಿತು ಕ್ರಮ:
ಪೌರಾಯುಕ್ತ ಉಮೇಶ್.

ಹಿರಿಯೂರು:
ರಾಜ್ಯ ಸರ್ಕಾರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ನಿರ್ದೇಶನದಂತೆ ಡಿಸೆಂಬರ್ 20 ರಿಂದ 24 ರವರೆಗಿನ ಒಂದು ವಾರದ ಅವಧಿಯನ್ನು ಉತ್ತಮ ಆಡಳಿತ ವಾರ ಎಂದು ಪರಿಗಣಿಸಿ, ಸಾರ್ವಜನಿಕರರ ಕುಂದುಕೊರತೆಗಳ ಇತ್ಯರ್ಥಕ್ಕೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತ ಉಮೇಶ್ ತಿಳಿಸಿದ್ದಾರೆ.
ಈ ಅವಧಿಯಲ್ಲಿ ನಗರಸಭೆಗೆ ಸಂಬಂಧಿಸಿದಂತೆ ಸಾರ್ವಜನಿಕ ಕುಂದು ಕೊರತೆಗಳ ಮನವಿಯನ್ನು ಇತ್ಯರ್ಥ ಪಡಿಸುವ ವಿಶೇಷ ಕಾರ್ಯಕ್ರಮವನ್ನು ಹಿರಿಯೂರು ನಗರಸಭಾ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.
ಈ ವಿಶೇಷ ಕಾರ್ಯಕ್ರಮದ ಅಂಗವಾಗಿ ಆಸ್ತಿ ಮಾಲೀಕತ್ವ ವರ್ಗಾವಣೆ, ಇ.ಸ್ವತ್ತು, ಜನನ ಮರಣ ಪ್ರಮಾಣ ಪತ್ರ ವ್ಯಾಪಾರ, ಉದ್ದಿಮೆ ಪರವಾನಿಗೆ ಸೇವೆ ಪಡೆಯಬಹುದಾಗಿದೆ. ಡಿಸೆಂಬರ್ 20 ರಿಂದ ನಗರದ ಎಲ್ಲಾ ವಾರ್ಡ್ ಗಳ ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸುವ ಕುರಿತು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರು ಸೇವೆಯನ್ನು ಪಡೆಯಲು ನಗರಸಭೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ತಮ್ಮ ಸ್ವತ್ತಿನ ಸೂಕ್ತ ದಾಖಲಾತಿಗಳ ಪರಿಶೀಲನೆಯೊಂದಿಗೆ ಸೇವೆಯನ್ನು ಸ್ಥಳದಲ್ಲಿಯೇ ವಾರ್ಡ್ ವಾರು ನಿಗಧಿಗೊಳಿಸಿದ ದಿನಾಂಕದಂದು ಹಾಗೂ ಹೊಸದಾಗಿ ಅರ್ಜಿಯನ್ನು ಸಲ್ಲಿಸಿ ಸೇವೆಯನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *