ಮೇಕೆದಾಟು ಪಾದಯಾತ್ರೆಯಲ್ಲಿ ಜಿ.ಎಸ್.ಮಂಜುನಾಥ್
1 min read
ಮೇಕೆದಾಟು ಪಾದಯಾತ್ರೆಯಲ್ಲಿ ಜಿ.ಎಸ್.ಮಂಜುನಾಥ್ ________________
ಸಾತನೂರು : ನಮ್ಮ ನೀರು ನಮ್ಮ ಹಕ್ಕು ಎಂಬ ಹೋರಾಟದ ಭಾಗವಾಗಿ ಮೇಕೆದಾಟು ಪಾದಯಾತ್ರೆ ಪ್ರಾರಂಭಿಸಲಾಗಿದ್ದು ಇದರಲ್ಲಿ ಭಾಗವಹಿಸುವಂತೆ ಕೆಪಿಸಿಸಿ ರಾಜ್ಯ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ರಾದ ಜಿ ಎಸ್ ಮಂಜುನಾಥ್ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಸಾತನೂರು ಮಾತ್ರ ಗ್ರಾಮದಲ್ಲಿ ಮಾತನಾಡಿದ ಜಿಎಸ್ ಮಂಜುನಾಥ್ ನಮ್ಮ ಕಾರ್ಯಕರ್ತರು ಯಾವುದೇ ವದಂತಿಗಳಿಗೆ , ಗಾಸಿಪ್ ಗಳಿಗೆ ಕಿವಿಗೊಡದೆ ಸರ್ಕಾರ ಪಾದಯಾತ್ರೆಯನ್ನು ತಡೆಯೊಡ್ಡುತ್ತದೆ ಎಂಬ ಅನುಮಾನಗಳಿಗೆ ಎಡೆಮಾಡದೆ ನಿಶ್ಚಿಂತೆಯಾಗಿ ಭಾಗವಹಿಸಿ ಈ ಐತಿಹಾಸಿಕ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಹಾಗೂ ನಮ್ಮ ಕಾಂಗ್ರೆಸ್ ಪಕ್ಷದ ದಾಖಲೆಯನ್ನು ಬರೆಯಬೇಕೆಂದು ಕರೆ ನೀಡಿದ್ದಾರೆ.