ಮನೆಯ ಬಳಿ ಗಿಡ ಮರಗಳನ್ನು ಬೆಳೆಸಿಕೊಳ್ಳಬೇಕು. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಿವಿ ಮಾತು.
1 min read
ಮನೆಯ ಬಳಿ ಗಿಡ ಮರಗಳನ್ನು ಬೆಳೆಸಿಕೊಳ್ಳಬೇಕು. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕೀವಿ ಮಾತು.
ಚಿತ್ರದುರ್ಗಹೊಯ್ಸಳ ನ್ಯೂಸ್/ಚಿತ್ರದುರ್ಗ,
ಚಿತ್ರದುರ್ಗ:
ನಗರದ ಎಲ್ಲಾ ಪಾರ್ಕ್ಗಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತಿದ್ದು ಸಾರ್ವಜನಿಕರು ಉತ್ತಮವಾಗಿ ಬಳಸಿಕೊಂಡು ಸ್ವಚ್ಛತೆ ಕಾಪಡಿಕೊಳ್ಳಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ರೂಟ್ ಸೆಟ್ ಪಕ್ಕದಲ್ಲಿ ನಿರ್ಮಿಸಿರುವ ನೂತನ ಪಾರ್ಕ್ ಉದ್ಘಾಟನೆ ಮಾಡಿ ಮಾತನಾಡಿದರು.
ಜನರು ತಮ್ಮ ಸಂಜೆಯ ಸಮಯ ಮತ್ತು ಉತ್ತಮ ಗಾಳಿಗಾಗಿ ಪಾರ್ಕ್ ಗಳ ಮೊರೆ ಹೋಗಿತ್ತಿದ್ದಾರೆ. ನಗರದಲ್ಲಿ ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದ್ದು ಕೋವಿಡ್ ನಿಂದ ಸ್ವಲ್ಪ ನಿಧಾನವಾಗಿದೆ. ಜನರಿಗೆ ಉತ್ತಮ ಮನೆಯಂತೆ ಸುತ್ತಮುತ್ತಲಿನ ಪರಿಸರ ಬೆಳೆಸುವುದು ಅಷ್ಟೆ ಮುಖ್ಯವಾಗಿದೆ. ಮನೆಯ ಬಳಿ ಗಿಡ ಮರಗಳನ್ನು ಬೆಳೆಸಿಕೊಳ್ಳಬೇಕು. ಪಾರ್ಕ್ ನಿಂದ ಹಿರಿಯ ನಾಗರಿಕರು, ಮಹಿಳೆಯರು, ಯುವಕರು ,ಮಕ್ಕಳಿಗೆ ಸೇರಿ ಎಲ್ಲಾರಿಗೂ ಅನುಕೂಲವಾಗುತ್ತದೆ ಎಂದರು. ಆದರೆ ದಯಮಾಡಿ ಸ್ವಚ್ಛತೆಯನ್ನು ಕಾಪಡಬೇಕು. ತಮ್ಮ ಮನೆಯನ್ನು ಯಾವ ರೀತಿ ಸ್ವಚ್ಚತೆಯಿಂದ ಇಟ್ಟಿರುತ್ತಾರೆಯೋ ಅದೇ ರೀತಿಯಲ್ಲಿ ಪಾರ್ಕ್ ಉಪಯೋಗ ಪಡೆಯುವವರು ನೋಡಿಕೊಂಡರೆ ಉತ್ತಮ ವಾತವರಣವಿರುತ್ತದೆ ಎಂದು ತಿಳಿಸಿದರು.
ಜೋಗಿಮಟ್ಟಿ ರಸ್ತೆಯಲ್ಲಿನ ಬನ್ನಿಕಾಳಮ್ಮ ದೇವಸ್ಥಾನದ ಬಳಿಯ ಉದ್ಯಾನವನವನ್ನು 5 ಲಕ್ಷ ರೂ ವೆಚ್ಚದಲ್ಲಿ ಉದ್ಯಾನವನ ಮತ್ತು ಜಿಮ್ ಸಹ ಉದ್ಘಾಟಿಸಿದ್ದೇನೆ ಎಂದರು.
ಸುಣ್ಣದ ಗುಮ್ಮಿ ವಿಚಾರವಾಗಿ ಸಾರ್ವಜನಿಕರು ಸ್ಥಳಾಂತರಿಸಲು ಮನವಿ ಮಾಡಿದ್ದಾರೆ.ಆದರೆ ಸ್ಥಳಾಂತರಿಸುವುದು ನನಗೆ ಕಷ್ಟವೇನಲ್ಲ ಬದಲಿ ಜಾಗದ ಸಮಸ್ಯೆಯಾಗಿದೆ. ಇವರಿಗೆ ಎಲ್ಲಿ ಜಾಗವನ್ನು ನೀಡಬೇಕೆಂದು ತಿಳಿಯುತ್ತಿಲ್ಲ ಎಂದರು.
ನನ್ನ ಕ್ಷೇತ್ರದಲ್ಲಿ ಜಾಗದ ಸಮಸ್ಯೆ ಇದೆ. ಹಣ ನೀಡಿದರು ಸಹಾ ಎಲ್ಲಿಯೂ ಸಹಾ ಜಾಗ ಸಿಗುತ್ತಿಲ್ಲ. ಮನೆಗಾಗಿ ಸಾವಿರಾರು ಅರ್ಜಿಗಳು ಬಂದಿವೆ. ಅವರಿಗೆ ಮನೆ ನಿರ್ಮಾಣ ಮಾಡಲು ಸಹಾ ಜಾಗದ ಕೊರತೆ ಕಾಡುತ್ತಿದೆ. ಈಗಾಗಲೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹಾರ ಮಾಡಲಾಗಿದೆ, ಮುಂದಿನ ದಿನದಲ್ಲಿ ದಿನದ 24 ಗಂಟೆ ನೀರನ್ನು ನೀಡಲಾಗುವುದು. ಪೈಪ್ ಮೂಲಕ ಗ್ಯಾಸ್ ಸಂಪರ್ಕವನ್ನು ನೀಡುವ ಕಾರ್ಯವೂ ಸಹಾ ಭರದಿಂದ ಸಾಗಿದೆ. ಮುಂದಿನ ದಿನದಲ್ಲಿ ನಿಮ್ಮ ಬಡಾವಣೆಗೂ ಸಹಾ ಸಂಪರ್ಕ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ನಗರಾಭಿವೃದ್ದಿ ಪ್ರಾಧಿಕಾರದಿಂದ ಇಲ್ಲಿ ಉತ್ತಮವಾದ ಜಿಮ್ ಸಾಧನಗಳನ್ನು ಅಳವಡಿಕೆ ಮಾಡಲಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಿ, ಕಸದ ರಾಶಿ ಬೀಳದ ಹಾಗೇ ನೋಡಿಕೊಳ್ಳಿ ಮನೆಯಿಂದ ಇಂತಿಷ್ಟು ಹಣವನ್ನು ನೀಡುವುದರ ಮೂಲಕ ಯಾರಿಗಾದರೂ ಕೆಲಸ ನೀಡಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ ಎಂದು ಶಾಸಕರು ಸೂಚನೆ ನೀಡಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬದರಿನಾಥ್, ಸದಸ್ಯರಾದ ಮಂಜುನಾಥ್, ಓಂಕಾರ್, ರೇಖಾ, ಆಯುಕ್ತರಾದ ವಿಜಯಕುಮಾರ್ ನಗರಸಭೆಯ ಮಾಜಿ ಸದಸ್ಯರಾದ ಮಹೇಶ್, ಇಂಜಿನಿಯರ್ ಕಿರಣ್,ಗುತ್ತಿಗೆದಾರರಾದ ಕುಮಾರ್, ನಾಗರಾಜ್ ಸೇರಿದಂತೆ ಬಡಾವಣೆಯ ಜನತೆ ಭಾಗವಹಿಸಿದ್ದರು.