March 29, 2024

Chitradurga hoysala

Kannada news portal

ರಂಭಾಪುರಿ ಜಗದ್ಗುರುಗಳ ಪೀಠಾರೋಹಣ ವರ್ಧಂತಿ ಮಹೋತ್ಸವ

1 min read


ರಂಭಾಪುರಿ ಜಗದ್ಗುರುಗಳ
ಪೀಠಾರೋಹಣ ವರ್ಧಂತಿ ಮಹೋತ್ಸವ _________________

ಚಿತ್ರದುರ್ಗ ಹೊಯ್ಸಳ ನ್ಯೂಸ್/ ಬಾಳೆಹೊನ್ನೂರು,

ಬಾಳೆಹೊನ್ನೂರು:

ಜನ ಮಾನಸದ ಹೃದಯ ಗೆದ್ದಿರುವ ಬಾಳೆಹೊನ್ನೂರು   ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ
ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 31ನೇ ವರ್ಷದ ಪೀಠಾರೋಹಣ
ವರ್ಧಂತಿ ಮಹೋತ್ಸವವು ಫೆಬ್ರುವರಿ 3ರ ಗುರುವಾರದಂದು ಬೆಳಿಗ್ಗೆ 11
ಗಂಟೆಗೆ ಜರುಗುವುದು,ಮತ್ತು ರಂಭಾಪುರಿ
ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ
ನಡೆಯುವ ವರ್ಧಂತಿ ಮಹೋತ್ಸವದಲ್ಲಿ ಶ್ರೀ ಜಗದ್ಗುರುಗಳು
ವೀರಸಿಂಹಾಸನ ಪೂಜೆಯೊಂದಿಗೆ ಪೀಠಾರೋಹಣ ಮಾಡಿ ಶುಭಾಶೀರ್ವಾದ ಸಂದೇಶ
ಅನುಗ್ರಹಿಸುವರು. ಪ್ರಾತ:ಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಮತ್ತು
ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ,ಹಾಗೂ ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ
ಮಹಾರುದ್ರಾಭಿಷೇಕ, ಅಷ್ಟೋತ್ತರ ಲಕ್ಷ ಬಿಲ್ವಾರ್ಚನೆ ಹಾಗೂ
ಶಕ್ತಿಮಾತೆ ಶ್ರೀ ಚೌಡೇಶ್ವರಿ,ಶ್ರೀ ಭದ್ರಕಾಳಿ,ಶ್ರೀ ಪಾರ್ವತಿ ಅಮ್ಮ ನವರಿಗೆ
ಕುಂಕುಮಾರ್ಚನೆ ಮಹಾ ಮಂಗಳಾರತಿ ಕಾರ್ಯಕ್ರಮಗಳು ನಡೆಯುತ್ತವೆ. ಜೊತೆಗೆ ತೀರ್ಥ ಪ್ರಸಾದ ವಿನಿಯೋಗ
ಮಾಡಲಾಗುವುದು. *ಮುಂಜಾಗ್ರತಾ ಕ್ರಮ*: ಕೋವಿಡ್-19ರ ಅಲೆ ಇರುವುದರಿಂದ ಆಗಮಿಸುವ
ಪ್ರತಿಯೊಬ್ಬರೂ ನಿಯಮಾವಳಿಗಳನ್ನು ಪಾಲಿಸಬೇಕು ಎಂದು
ಬಾಳೆಹೊನ್ನುರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ವಾರ್ತಾ ಸಂಯೋಜನಾಧಿಕಾರಿ ಬಾಳನಗೌಡ್ರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *