March 28, 2024

Chitradurga hoysala

Kannada news portal

ಶ್ರೀರಾಮುಲುಗೆ ಕುಚುಕು ಗೆಳೆಯ ಜನಾರ್ದನರೆಡ್ಡಿ ಶುಭ ಕೋರಿದ ಪತ್ರದಲ್ಲಿ ಏನ್ ಬರೆದಿದ್ದಾರೆ.?

1 min read

ಸ್ನೇಹ ಎಂದ ಕೂಡಲೇ ತಟ್ಟನೆ ನೆನಪು ಆಗುವುದು ರಾಜ್ಯ ರಾಜಕಾರಣದಲ್ಲಿ ಕಿಂಗ್ ಮೇಕರ್ ಆಗಿ ಸರ್ಕಾರಗಳನ್ನು ತರುವ ಶಕ್ತಿಯಾಗಿ ಹೊತಹೊಮ್ಮಿದ ಇಬ್ಬರು ಗೆಳೆಯರು ಎಂದರೆ ಬಳ್ಳಾರಿಯ ದೃವ ತಾರೆಗಳಾದ ರಾಜ್ಯದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ಗಾಲಿ ಜನಾರ್ದನರೆಡ್ಡಿ ಇಬ್ಬರು ಪ್ರಾಣ ಸ್ನೇಹಿತರು ಎಂಬುದು ಎಲ್ಲಾರಿಗೂ ತಿಳಿದಿರು ವಿಚಾರ, ಆದರೆ ಇಂದು ಕುಚುಕು ಗೆಳೆಯ ಶ್ರೀರಾಮುಲು ಹುಟ್ಟು ಹಬ್ಬಕ್ಕೆ ಜನಾರ್ದನರೆಡ್ಡಿ ತಮ್ಮ ಸ್ನೇಹ ಮತ್ತು ಸ್ನೇಹಿತನ ಕುರಿತು ತಮ್ಮ ಅಕ್ಷರಗಳ ಮೂಲಕ ತಮ್ಮ ಸ್ನೇಹದ ಮಜಲುಗಳನ್ನ ಬಿಚ್ಚಿಟ್ಟಿದ್ದಾರೆ. ಹೌದು ಈ ರೀತಿಯಲ್ಲಿ ವರ್ಣನೆ ಮೂಲಕ‌ ಶುಭಾಷಯ ಕೋರಿದ್ದಾರೆ.

ಜನ ನಾಯಕ, ಬಡವರ ಬಂಧು, ಆರೋಗ್ಯ ಸಚಿವ, ನನ್ನ ಪ್ರಾಣ ಸ್ನೇಹಿತ ಶ್ರೀರಾಮುಲು ಅವರಿಗೆ ಸಾಗರದಷ್ಟು ಆಳವಾಗಿರುವ
ನಮ್ಮ ಗಟ್ಟಿ ಗೆಳತನವನ್ನು ಚಿಕ್ಕ ಕವನದ ರೂಪದಲ್ಲಿ ಕಟ್ಟಿ ಹಾಕುವ ಮೂಲಕ ಹುಟ್ಟು ಹಬ್ಬದ ಶುಭ ಕೋರುತ್ತೇನೆ ಎಂದು ರೆಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಾದ್ರೆ, ರೆಡ್ಡಿ, ಶ್ರೀರಾಮುಲುಗೆ ಯಾವ ರೀತಿ ಶುಭೋರಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.

ಭೂತಾಯಿಯ ಮಡಿಲಲ್ಲಿ ಆಡಿ ಬೆಳೆದ ಸ್ನೇಹ ನಮ್ಮದು.
ಕನ್ನಡಮ್ಮನ ಮಣ್ಣಲ್ಲಿ ಹದವಾಗಿ ಬೆಳೆದ ಪವಿತ್ರ ಸ್ನೇಹ ನಮ್ಮದು.
ಬಡತನ ಸಿರಿತನವನ್ನು ಮೆಟ್ಟಿ ನಿಂತ ಸ್ನೇಹ ನಮ್ಮದು.
ರಕ್ತ ಸಂಬಂಧವನ್ನು ಮೀರಿ ಬೆಳೆದ ಸ್ನೇಹ ನಮ್ಮದು.
ಜಾತಿ, ಮತ, ಭೇದವನ್ನು ಮೀರಿದ ಸ್ನೇಹ ನಮ್ಮದು.
ಸ್ವಾರ್ಥವನ್ನು ಹತ್ತಿರ ಸುಳಿಯಲು ಬಿಡದ, ನಿಸ್ವಾರ್ಥ ಸ್ನೇಹ ನಮ್ಮದು.
ಅವನು ಜೀವಕ್ಕೆ ಜೀವ ಕೊಡುವ ಗೆಳೆಯ
ಅಧಿಕಾರದ ದಾಹವಿಲ್ಲ, ಸಿರಿ ಸಂಪತ್ತಿನ ಚಿಂತೆ ಇಲ್ಲ. 
ಇವೆಲ್ಲವನ್ನು ಮೀರಿದ್ದು, ನಮ್ಮ ಸ್ನೇಹ.
ಹೇಗೆ ವರ್ಣಿಸಲಿ ಈ ನನ್ನ ಸ್ನೇಹಿತನ ಸ್ನೇಹವನ್ನು
ಅಕ್ಷರಗಳಲ್ಲಿ ಹೇಗೆ ಕಟ್ಟಿಹಾಕಲಿ ಈ ನನ್ನ ಗೆಳೆಯನ ಗೆಳೆತನವನ್ನು.
ನನ್ನ ಕಷ್ಟ ಕಾಲದಲ್ಲಿ ಸ್ನೇಹವೆಂಬ ವಜ್ರದ ರಕ್ಷಾ ಕವಚ ನೀಡಿದವನು ನನ್ನ ಗೆಳೆಯ.
ಗೆಳೆತನದಲ್ಲಿ ಸ್ವಾರ್ಥ ಬಯಸದೆ ಸದಾ ನನ್ನ ಬೆನ್ನ ಹಿಂದೆ ನೆರಳಾಗಿ ನಿಂತವನು ನನ್ನ ಗೆಳೆಯ.
ನಮ್ಮ ನಿಸ್ವಾರ್ಥ, ನಿಷ್ಕಲ್ಮಶ, ನಿಷ್ಕಳಂಕ ಸ್ನೇಹಕ್ಕೆ ಸಾಕ್ಷಿಯಾದವನು ನನ್ನ ಗೆಳೆಯ.
ಬಡವರ ಬಂಧು ನೀನು.
ಬಡವ, ಬಲ್ಲಿದರ ಆದರ್ಶ ನಾಯಕ ನೀನು.
ಕಷ್ಟದಲ್ಲಿರುವ ಜನರ ರಕ್ಷಕ ನೀನು.
ಜನ ನಾಯಕನಾಗಿ ಜನರ ಮನದಾಳದಲ್ಲಿ ಬೇರೂರಿದ ನಾಯಕ ನೀನು.
ಆಕಾಶದಲ್ಲಿನ ಸಹಸ್ರಾರು ತಾರೆಗಳಲ್ಲಿನ ದೃವ ತಾರೆ ನೀನು.
ಇವನೇ ನನ್ನ ಪ್ರಾಣ ಸ್ನೇಹಿತ ಶ್ರೀರಾಮುಲು..
ಆ ಭಗವಂತನು ನಿನಗೆ ಆರೋಗ್ಯ, ದೀರ್ಘಾಯುಷ್ಯ ನೀಡಲಿ, ರಾಜಕೀಯ ಜೀವನದಲ್ಲಿ ಮೇಲೆತ್ತರಕ್ಕೆ ಬೆಳೆದು, ಅತ್ಯುನ್ನತ ಸ್ಥಾನ ದೊರಕಲಿ, ಇಂತಹ ಅನೇಕ ಹುಟ್ಟು ಹಬ್ಬಗಳನ್ನು ಜೊತೆ ಜೊತೆಗೆ ಆಚರಿಸಿಕೊಳ್ಳುವ ಭಾಗ್ಯ ನಮ್ಮದಾಗಲಿ, ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ ಎಂದು ಆಶಿಸುತ್ತಾ..
ಇದೋ ನಿನಗೆ ಮತ್ತೊಮ್ಮೆ ಮನಪೂರ್ವಕವಾಗಿ ನಿನ್ನ ಪ್ರಾಣ
ಸ್ನೇಹಿತ ಕೋರುತ್ತಿರುವ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಗೆಳೆಯ..
ನಿನ್ನ ನಲ್ಮೆಯ ಜೀವದ ಗೆಳೆಯ
-ಗಾಲಿ ಜನಾರ್ಧನ್  ರೆಡ್ಡಿ.

About The Author

Leave a Reply

Your email address will not be published. Required fields are marked *