ಪೊಲೀಸ್ ರಿಂದ ಮಿಂಚಿನ ಕಾರ್ಯಚರಣೆ ಗಾಂಜಾ ಕೇಸ್ ನಲ್ಲಿ ೮ ಜನರ ಬಂಧನ, ವರಿಷ್ಠಾದಿಕಾರಿಗಳಿಂದ ಶ್ಲಾಘನೆ
1 min readಪೊಲೀಸ್ ರಿಂದ ಮಿಂಚಿನ ಕಾರ್ಯಚರಣೆ
ಗಾಂಜಾ ಕೇಸ್ ನಲ್ಲಿ ೮ ಜನರ ಬಂಧನ,ವರಿಷ್ಠಾದಿಕಾರಿಗಳಿಂದ ಶ್ಲಾಘನೆ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ:
ನಗರ ಪೊಲೀಸರಿಂದ ಗಾಂಜಾ ಸೊಪ್ಪನ್ನು ಮಾರಾಟ ಮತ್ತು ಸೇವೆನೆ ಮಾಡುತ್ತಿದ್ದ ಒಟ್ಟು 8 ಜನರ ಬಂಧಿಸಿ,80 ಸಾವಿರ ರೂಪಾಯಿ ಮೌಲ್ಯದ ಗಾಂಜಾ ಸೊಪ್ಪು, ನಗದು ಹಣ ಹಾಗೂ ಒಂದು ಆಟೋ ವಶಪಡಿಸಿಕೊಳ್ಳಲಾಗಿದೆ.
ಸೋಮಶೇಖರ, ಭರತ್, ಭಾಸ್ಕರಾಚಾರಿ, ಗೌಸ್ಪೀರ್, ದಸ್ತಗಿರ್, ಸಾತ್ವಿಕ್, ಬಾಬು ಫಕೃದ್ದೀನ್, ದಾದಾಪೀರ್ ,ಬಂಧಿತ ಆರೋಪಿಗಳಾಗಿದ್ದಾರೆ.
ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ನಯೀಂ ಅಹಮದ್ ರವರು
ದಿನಾಂಕ:15.05.2022 ರಂದು ಚಿತ್ರದುರ್ಗ ನಗರದ ಜಟ್ ಪಟ್ ನಗರದಿಂದ ಕುರುಬರ ಗುಡ್ಡಕ್ಕೆ ಹೋಗುವ ರಸ್ತೆಯಲ್ಲಿ ಸ್ಮಶಾನದ ಮುಂಭಾಗದಲ್ಲಿ ಗಾಂಜಾ ಸೊಪ್ಪನ್ನು ಮಾರುವುದು ಮತ್ತು ಸೇದುವುದು ಮಾಡುತ್ತಿದ್ದಾರೆ ಎಂಬಾ ಮಾಹಿತಿ ಮೇರೆಗೆ ನಗರ ಪೋಲೀಸ್ ಠಾಣೆ ಮೊ.ನಂ: 96/2022 ಕಲಂ: 8 (ಸಿ), 20 (ಬಿ), 25, 27 ಎನ್.ಡಿ.ಪಿ.ಎಸ್ ಆಕ್ಟ್ 1985 ರೀತ್ಯಾ ಸ್ವಯಂ ದೂರು ದಾಖಲಿಸಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಾದ ಕೆ ಪರಶುರಾಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ,ಪೊಲೀಸ್ ಉಪಾ ಧೀಕ್ಷಕರಾದ ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಎ.ಎಸ್.ಐ ಸೈಯದ್ ಸಿರಾಜುದ್ದಿನ್ ಮತ್ತು ಠಾಣಾ ಸಿಬ್ಬಂದಿಯವರಾದ ಶ್ರೀನಿವಾಸ, ರಂಗಸ್ವಾಮಿ, ಮತ್ತು ಬೀರೇಶ್, ಶಿವರಾಜ್ ರವರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತಿದ್ದ 3 ಜನರ ಪೈಕಿ 2 ಜನರನ್ನು ಹಾಗೂ ಗಾಂಜಾ ಸೊಪ್ಪನ್ನು ಸೇದುತಿದ್ದ 6 ಜನರನ್ನು ವಶಕ್ಕೆ ಪಡೆದಿದ್ದಾರೆ.
ಇವರುಗಳು ಆಂಧ್ರಪ್ರದೇಶದ ವಿಶಾಕ ಪಟ್ಟಣಕ್ಕೆ ಬಳ್ಳಾರಿ ಮರ್ಗವಾಗಿ ರೈಲಿನಲ್ಲಿ ಹೋಗಿ ಅಲ್ಲಿ ಗೋವಿಂದಪ್ಪ
ಎಂಬುವವರ ಬಳಿ ಗಾಂಜಾ ಸೊಪ್ಪನ್ನು ಖರೀದಿಸಿಕೊಂಡು ಬ್ಯಾಗ್ ನಲ್ಲಿ ಹಾಕಿಕೊಂಡು ಬಳ್ಳಾರಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಬಂದು ಚಿತ್ರದುರ್ಗದಲ್ಲಿ ಜಟ್-ಪಟ್ ನಗರದ ಬಳಿ ಇರುವ ಸ್ಮಶಾನ, ಗುಡ್ಡ, ಜಾಲಿಗಳಲ್ಲಿ, ಅಗಳೇರಿಯ ಕೆಂಚಪ್ಪನ ಬಾವಿ ಹಾಗೂ ಗುಡ್ಡದ ಕಡೆಗಳಲ್ಲಿ ಹಾಗೂ ಇತರೆ ನಿರ್ಜನ ಪ್ರದೇಶಗಳಿಗೆ ಗ್ರಾಹಕರನ್ನು ಕರೆಯಿಸಿಕೊಂಡು ಸಣ್ಣ-ಸಣ್ಣ ಕವರ್ ಗಳಲ್ಲಿ ಗಾಂಜಾ ಸೊಪ್ಪನ್ನು ತುಂಬಿ ಗ್ರಾಹಕರಿಗೆ 400 ರೂಗಳಿಗೆ 1 ಪ್ಯಾಕೇಟ್ ನಂತೆ ಮಾರಾಟ ಮಾಡುತ್ತಿರುತ್ತಾರೆ ಎಂದು ತಿಳಿದು ಬಂದಿರುತ್ತದೆ.
ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿಯವರ ಕಾರ್ಯವನ್ನು ಚಿತ್ರದುರ್ಗ
ಪೊಲೀಸ್ ವರಿಷ್ಠಾದಿಕಾರಿಗಳಾದ ಕೆ ಪರಶುರಾಮ್, ರವರು ಶ್ಲಾಘಿಸಿರುತ್ತಾರೆ.