March 29, 2024

Chitradurga hoysala

Kannada news portal

ಸಂಘಮಿತ್ರ ಸಂಸ್ಥೆ ವತಿಯಿಂದ ನಾಳೆ ರಕ್ತದಾನ ಶಿಬಿರ

1 min read

ಸಂಘಮಿತ್ರ ಸಂಸ್ಥೆ ವತಿಯಿಂದ ನಾಳೆ ರಕ್ತದಾನ ಶಿಬಿರ


________________

ಚಿತ್ರದುರ್ಗ:

ನಗರದ ಸಂಘಮಿತ್ರ ಸಂಸ್ಥೆಯ ವತಿಯಿಂದ ಗೌತಮ ಬುದ್ಧ, ಬಸವೇಶ್ವರ, ಅಂಬೇಡ್ಕರ್‌ ರವರ ಸ್ಮರಣಾರ್ಥವಾಗಿ ನಾಳೆ (ಗುರುವಾರ) ಬೆಳಿಗ್ಗೆ ೦೯ ಗಂಟೆಯಿಂದ ರಕ್ತದಾನ ಶಿಬಿರವನ್ನು ಮದಕರಿ ವೃತ್ತದ ಬಳಿ ಇರುವ ಐ ಎಂ ಎ ಹಾಲ್ ನಲ್ಲಿ ಏರ್ಪಡಿಸಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ರವರು ವಹಿಸಿಕೊಳ್ಳಲಿದ್ದಾರೆ.

ವಿಶೇಷ ಅತಿಥಿಗಳಾಗಿ ಕೃಷಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ವೆಂಕಟೇಶ್ ಚಿತ್ರ ನಟ ಬುಲೆಟ್ ವಿನು ಪಾಲ್ಗೊಳ್ಳುಲ್ಲಿದ್ದು ಸಾರ್ವಜನಿಕರು ಮತ್ತು ಆಸಕ್ತ ರಕ್ತದಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ರೋಗಿಗಳ ಜೀವ ಉಳಿಸಲು ಸಹಕರಿಸಬೇಕೆಂದು ಸಂಘಮಿತ್ರ ನಗರ,ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ
ಜಿ.ಪರಶುರಾಮ್ ಗುಂಡಣ್ಣ ನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *