April 16, 2024

Chitradurga hoysala

Kannada news portal

ಡಾ:ಸತೀಶ್ ಇವರ ತಂದೆ ಸಿಂಗಾಪುರದ ನಿವೃತ್ತ ಅಬಕಾರಿ ಉಪ ಅಧೀಕ್ಷಕ ಹೆಚ್.ಈಶ್ವರಪ್ಪ  ನಿಧನ

1 min read

ಡಾ:ಸತೀಶ್ ಇವರ ತಂದೆ ಸಿಂಗಾಪುರದ
ನಿವೃತ್ತ ಅಬಕಾರಿ ಉಪ ಅಧೀಕ್ಷಕ
ಹೆಚ್.ಈಶ್ವರಪ್ಪ  ನಿಧನ

ಚಿತ್ರದುರ್ಗ:

ಜಿಲ್ಲಾ ಅಸ್ಪತ್ರೆಯ ಹಿರಿಯ ವೈದ್ಯ ಡಾ.ಈ.ಸತೀಶ್ ಅವರ ತಂದೆ ನಿವೃತ್ತ ಅಬಕಾರಿ ಉಪ ಅಧೀಕ್ಷಕ ಹೆಚ್.ಈಶ್ವರಪ್ಪ ಸುಮಾರ 88 ವಯೋಸಹಜ ಅನಾರೋಗ್ಯದಿಂದ ಬುಧವಾರ ಮಧ್ಯಾನ್ಹ 3:40 ಕ್ಕೆ ನಿಧನರಾಗಿದ್ದಾರೆ.

ಎಚ್.ಈಶ್ವರಪ್ಪ ಇವರು ಬಾಬು ಜಗಜೀವನ್ ರಾಮ್ ಕ್ರೆಡಿಟ್ ಕೋ ಆಪರೇಟಿ ಸೊಸೈಟಿಯ ಅಧ್ಯಕ್ಷರಾಗಿಯು ಸೇವೆಸಲ್ಲಿಸಿದರು.

ಚಿತ್ರದುರ್ಗ ತಾಲ್ಲೂಕಿನ ಸಿಂಗಾಪುರ ಗ್ರಾಮದ ವಾಸಿಯಾಗಿದ್ದ ಇವರು ಪ್ರಸ್ತುತ ನಗರದ ಜೆಸಿಆರ್ ಬಡಾವಣೆಯ ಎರಡನೇ ಕ್ರಾಸ್ ನಲ್ಲಿ ವಾಸವಾಗಿದ್ದರು.ಮೃತರಿಗೆ ಪುತ್ರರಾದ ಡಾ.ಸತೀಶ್ ಮತ್ತು ಓರ್ವ ಪುತ್ರಿ ಇದ್ದಾರೆ. ಅಂತ್ಯಕ್ರಿಯೆಯನ್ನು ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

About The Author

Leave a Reply

Your email address will not be published. Required fields are marked *