ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಿದ ಹೆಚ್ ಆಂಜನೇಯ ರವರ ಸೋಲು ದುರದೃಷ್ಟಕರ
1 min readಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಿದ ಹೆಚ್ ಆಂಜನೇಯ ರವರ ಸೋಲು ದುರದೃಷ್ಟಕರ
ಚಿತ್ರದುರ್ಗ ಹೊಯ್ಸಳ ಸುದ್ದಿ //
ರಾಯಚೂರು :
ದಲಿತ ಸಮುದಾಗಳ ಅಭಿವೃದ್ಧಿ ದೃಷ್ಠಿಯಿಂದ ಹೆಚ್ ಆಂಜನೇಯ ನವರು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾಗಿದ್ದಾಗ ಎಸ್ ಸಿಪಿ, ಟಿಎಸ್ಪಿ ಜಾರಿಗೆ ತಂದು ಈ ಸಮುದಾಯಗಳ ಅಭಿವೃದ್ಧಿಗೆ ತಮ್ಮದೇ ಅದ ಕೊಡುಗೆ ನೀಡಿದರು ಎಂದು ಯುವ ಮುಖಂಡ ರವಿ ಬೋಸರಾಜ್ ತಿಳಿಸಿದರು. ನಗರದಲ್ಲಿ ಆದಿ ಜಾಂಬವ ಸೇವಾ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅನೇಕ ಉತ್ತಮ ಕೆಲಸಗಳನ್ನು ಮಾಡಿ ,ರಾಜ್ಯಕ್ಕೆ ಮಾದರಿಯಾದರು ಆದರೆ ಇಂತಹ ನಾಯಕನನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಕಳೆದ ಚುನಾವಣೆಯಲ್ಲಿ ಸೋಲಿಸಿರುವುದು ದುರದೃಷ್ಟ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳು ಮಾಜಿ ಸಚಿವರಾದ ಹೆಚ್ ಆಂಜನೇಯ ,ಶಾಸಕ ಬಸವನ ಗೌಡ ದದ್ದಲ್ , ಲಿಂಗಸೂಗೂರಿನ ಹೆಚ್.ಬಿ.ಮುರಾರಿ, ನರಸಿಂಹಲು, ಮಾಡಗೇರಿ, ಅದಿಜಾಂಬವ ಸೇವಾ ಟ್ರಸ್ಟ್ ಅಧ್ಯಕ್ಷ ರಾಮಣ್ಣ,ಉಪಾಧ್ಯಕ್ಷ ವೆಂಕಟೇಶ್ , ಪದಾಧಿಕಾರಿಗಳು, ಮಾದಿಗ ಸಮುದಾಯದ ಅನೇಕ ಮುಖಂಡರು ಮತ್ತಿತರರು ಇದ್ದರು .